ಮಹಾರಾಷ್ಟ್ರ: ದುಷ್ಕರ್ಮಿಗಳ ಗುಂಡಿಗೆ ಬಿಜೆಪಿ ಮುಖಂಡ ರವೀಂದ್ರ ಖರತ್, ಕುಟುಂಬದ ನಾಲ್ವರು ಸದಸ್ಯರು ಬಲಿ

Update: 2019-10-07 04:58 GMT

ಮುಂಬೈ, ಅ.7: ಮುಂಬೈನ ಜಲ್ಗಾಂವ್ ಜಿಲ್ಲೆಯ ಅವರ ನಿವಾಸದಲ್ಲಿ ಬಿಜೆಪಿ ಕಾರ್ಪೊರೇಟರ್ ರವೀಂದ್ರ ಖರತ್ (55)  ಮತ್ತು ಅವರ ನಾಲ್ವರು ಕುಟುಂಬ ಸದಸ್ಯರನ್ನು ದುಷ್ಕರ್ಮಿಗಳು  ಗುಂಡಿಕ್ಕಿ ಕೊಲೈಗೈದ ಘಟನೆ ರವಿವಾರ ರಾತ್ರಿ ನಡೆದಿದೆ.

ದೇಶಿಯ ನಿರ್ಮಿತ ಪಿಸ್ತೂಲ್ ಮತ್ತು ಮಾರಕಾಯುಧಗಳೊಂದಿಗೆ ಮನೆಗೆ ನುಗ್ಗಿದ ದುಷ್ಕರ್ಮಿಗಳು ರವೀಂದ್ರ ಖರತ್ ಮತ್ತು ಅವರ ಕುಟುಂಬದ ಸದಸ್ಯರ ಮೇಲೆ ಪಿಸ್ತೂಲ್ ನಿಂದ ಮನಬಂದಂತೆ ಗುಂಡಿನ ಮಳೆಗೆರೆದರು.

ಗಂಭೀರ ಗಾಯಗೊಂಡ ಖರತ್ ಅವರ ಸಹೋದರ ಸುನಿಲ್ (56), ಪುತ್ರರಾದ ಪ್ರೇಮ್‌ಸಾಗರ್ (26) ಮತ್ತು ರೋಹಿತ್ (25) ಮತ್ತು ಗಜಾರೆ ಎಂಬವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದರೂ ಫಲಕಾರಿಯಾಗಲಿಲ್ಲ. ಅವರು ಅಲ್ಲಿ ಮೃತಪಟ್ಟರು ಎಂದು ತಿಳಿದು ಬಂದಿದೆ.

ಖರತ್ ಮತ್ತು ಅವರ ಕುಟುಂಬದ ಸದಸ್ಯರ ಮೇಲೆ ಗುಂಡಿನ ಮಳೆಗೆರದು ಅಲ್ಲಿಂದ ಪರಾರಿಯಾದ ಆರೋಪಿಗಳು ಬಳಿಕ ಪೊಲೀಸ್ ಠಾಣೆಗೆ ಶಸ್ತ್ರಾಸ್ತ್ರ ಸಮೇತ ತೆರಳಿ ಶರಣಾದರು ಎನ್ನಲಾಗಿದೆ. ಬಜರ್‌ಪೆತ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News