ಕರ್ತವ್ಯ ಲೋಪ ಆರೋಪ: ಇಬ್ಬರು ಪೊಲೀಸರ ಅಮಾನತು
Update: 2019-10-26 17:28 GMT
ಶಿವಮೊಗ್ಗ, ಅ. 26: ಕರ್ತವ್ಯ ಲೋಪ ಎಸಗಿದ ಆರೋಪದ ಮೇರೆಗೆ ಜಿಲ್ಲೆಯ ಇಬ್ಬರು ಪೊಲೀಸ್ ಪೇದೆಗಳನ್ನು ಅಮಾನತುಗೊಳಿಸಿ ಜಿಲ್ಲಾ ರಕ್ಷಣಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ ಎಂದು ತಿಳಿದುಬಂದಿದೆ.
ಭದ್ರಾವತಿ ಹೊಸಮನೆ ಪೊಲೀಸ್ ಠಾಣೆಯ ರಂಗನಾಥ್ ಹಾಗೂ ಶಿವಮೊಗ್ಗ ಕೋಟೆ ಠಾಣೆಯ ರಾಮಕೃಷ್ಣ ಅಮಾನತುಗೊಂಡ ಪೇದೆಗಳಾಗಿದ್ದಾರೆ. ಇತ್ತೀಚೆಗೆ ವಿಶೇಷ ತಂಡವೊಂದು ಶಿವಮೊಗ್ಗ ಮತ್ತು ಭದ್ರಾವತಿಯಲ್ಲಿ ಓಸಿ ವಿರುದ್ಧ ಕಾರ್ಯಚರಣೆ ನಡೆಸಿ, ಹಲವು ಆರೋಪಿಗಳನ್ನು ಬಂಧಿಸಿ 37,350 ರೂ. ವಶಕ್ಕೆ ಪಡೆದುಕೊಂಡಿತ್ತು.
ಈ ವೇಳೆ ತಮ್ಮ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ, ಓ.ಸಿ. ಬರೆಯುವವರ ಬಗ್ಗೆ ಈ ಇಬ್ಬರು ಸಮರ್ಪಕ ಮಾಹಿತಿ ನೀಡುವ ಕಾರ್ಯ ನಡೆಸದಿರುವ ಆರೋಪ ಇವರ ಮೇಲಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ರಕ್ಷಣಾಧಿಕಾರಿಗಳು, ಅಮಾನತುಗೊಳಿಸಿ ಆದೇಶಿಸಿದ್ದಾರೆ.