ಅಜ್ಜಯ್ಯನ ಪೀಠಕ್ಕೆ ಡಿಕೆಶಿ ಭೇಟಿ
Update: 2019-10-27 11:17 GMT
ತುಮಕೂರು, ಅ.27: ತಿಪಟೂರು ತಾಲೂಕಿನ ನೊಣವಿನಕರೆಯ ಕಾಡಸಿದ್ದೇಶ್ವರ ಮಠಕ್ಕೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ರವಿವಾರ ಭೇಟಿ ನೀಡಿದರು.
ಡಿ.ಕೆ.ಶಿವಕುಮಾರ್ ಅವರು ಕುಟುಂಬದ ಸದಸ್ಯರೊಂದಿಗೆ ಅಜ್ಜಯ್ಯನ ಪೀಠಕ್ಕೆ ಭೇಟಿ ನೀಡಿದರು.
“ನಿನ್ನೆಯೇ ಭೇಟಿ ನೀಡಬೇಕಿತ್ತು. ಆದರೆ ಬರುವಾಗ ತಡವಾದ ಹಿನ್ನೆಲೆಯಲ್ಲಿ ಸಾಧ್ಯವಾಗಲಿಲ್ಲ. ಇವತ್ತು ಅಜ್ಜಯ್ಯನರನ್ನು ಭೇಟಿಯಾಗಿ ಆಶೀರ್ವಾದ ಪಡೆದಿರುವುದಾಗಿ ತಿಳಿಸಿದ ಡಿಕೆಶಿ " ನನಗೆ ಅಜ್ಜಯ್ಯನವರು ಎಲ್ಲ ಸಂದರ್ಭದಲ್ಲೂ ಮಾರ್ಗದರ್ಶನ ನೀಡಿದ್ದಾರೆ. ಧೈರ್ಯ ತುಂಬಿದ್ದಾರೆ.ನನಗೆ ಧೈರ್ಯವಿದೆ, ನಂಬಿಕೆಯಿದೆ. ನಾನು ನ್ಯಾಯಬದ್ಧನಾಗಿರುವುದಾಗಿ ಹೇಳಿದರು.