ನಕಲಿ ಕೀ ಬಳಸಿ ಬೈಕ್‍ ಕಳವು: ಮೂವರು ಆರೋಪಿಗಳ ಬಂಧನ

Update: 2019-10-29 15:15 GMT

ದಾವಣಗೆರೆ, ಅ.29: ನಕಲಿ ಕೀ ಬಳಸಿ ಬೈಕ್‍ಗಳನ್ನು ಕಳವು ಮಾಡುತ್ತಿದ್ದ ಮೂವರನ್ನು ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ. 

ನಿಟುವಳ್ಳಿಯ ಸತೀಶ ಕೆ, ನಾಗರಾಜ ಅಲಿಯಾಸ್ ಕೆಪ್ಪನಾಗ, ಗಣೇಶ ಬಂಧಿತ ಆರೋಪಿಗಳು.

ಪೊಲೀಸರು ಗಸ್ತು ತಿರುಗುತ್ತಿದ್ದಾಗ ಈ ಮೂವರು ಮೋಟರ್ ಸೈಕಲ್‍ನಲ್ಲಿ ಬರುತ್ತಿದ್ದು, ಪೊಲೀಸರ ಜೀಪ್ ನೋಡಿ ಗಾಬರಿಯಿಂದ ಓಡಿಹೋಗಲು ಪ್ರಯತ್ನಿಸುತ್ತಿದ್ದಾಗ ಪೊಲೀಸರು ಹಿಡಿದು ಪ್ರಶ್ನಿಸಿದ್ದಾರೆ. ಈ ವೇಳೆ, ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಬಳಿ ಕಾವೇರಿ ಬೇಕರಿ ಮುಂಭಾಗ ನಿಲ್ಲಿಸಿದ್ದ ಬೈಕ್‍ಗಳನ್ನು ನಕಲಿ ಕೀ ಬಳಸಿ ಕಳ್ಳತನ ಮಾಡಿರುವ ವಿಷಯವನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News