ಮಹಾರಾಷ್ಟ್ರದಲ್ಲಿ ಸರಕಾರ ರಚನೆ ಬಗ್ಗೆ ಮೌನಮುರಿದ ಶರದ್ ಪವಾರ್

Update: 2019-11-04 17:27 GMT

ಹೊಸದಿಲ್ಲಿ, ನ.4: ಮಹಾರಾಷ್ಟ್ರದಲ್ಲಿ ಸರಕಾರ ರಚನೆಯಲ್ಲಿ ಎನ್ ಸಿಪಿ ಪಾತ್ರದ ಬಗ್ಗೆ ಮೌನಮುರಿದಿರುವ ಶರದ್ ಪವಾರ್, ರಾಜ್ಯದಲ್ಲಿ ಸರಕಾರ ರಚನೆ ವಿಚಾರಕ್ಕೆ ಸಂಬಂಧಿಸಿ ಶಿವಸೇನೆಯು ತನ್ನನ್ನು ಸಂಪರ್ಕಿಸಿಲ್ಲ ಎಂದರು.

ಇಂದು ಶರದ್ ಪವಾರ್ ಅವರು , ರಾಜ್ಯದ ಜನರು ಎನ್ ಸಿಪಿ ವಿಪಕ್ಷ ಸ್ಥಾನದಲ್ಲಿ ಕುಳಿತುಕೊಳ್ಳುವ ತೀರ್ಪು ನೀಡಿದ್ದಾರೆ. ಆದರೆ ಭವಿಷ್ಯದ ನಿರ್ಧಾರಗಳ ಬಗ್ಗೆ ಈಗಲೇ ಹೇಳಿಕೆ ನೀಡಲಾಗುವುದಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News