ಸತೀಶ್ ಜಾರಕಿಹೊಳಿ, ಕೆ.ಪಿ.ಬಚ್ಚೇಗೌಡ ನಾಮಪತ್ರ ತಿರಸ್ಕೃತ
Update: 2019-11-19 09:57 GMT
ಬೆಂಗಳೂರು, ನ.19: ಗೋಕಾಕ್ ವಿಧಾನ ಸಭಾ ಕ್ಷೇತ್ರದಿಂದ ಉಪಚುನಾವಣೆಗೆ ನಾಮಪತ್ರ ಸಲ್ಲಿಸಿದ್ದ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಜೆಡಿಎಸ್ ನ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಕೆ.ಪಿ .ಬಚ್ಚೇಗೌಡ ಅವರ ನಾಮಪತ್ರಗಳು ಇಂದು ಪರಿಶೀಲನೆ ವೇಳೆ ತಿರಸ್ಕೃತಗೊಂಡಿವೆ.
ಸತೀಶ್ ಜಾರಕಿಹೋಳಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಂದು ನಾಮಪತ್ರ ಸಲ್ಲಿಸಿದ್ದರು. ಆದರೆ ಅವರು ನಾಮಪತ್ರದ ಜತೆ ಬಿ ಫಾರ್ಮ್ ಸಲ್ಲಿಸಿರಲಿಲ್ಲ. ಈ ಕಾರಣಕ್ಕಾಗಿ ನಾಮಪತ್ರ ತಿರಸ್ಕೃತಗೊಂಡಿದೆ. ಒಂದೇ ಬಿ ಫಾರ್ಮ್ ನಲ್ಲಿ ಇಬ್ಬರ ಹೆಸರು ಬರೆಯಲಾಗಿತ್ತು. ಈ ಕಾರಣದಿಂದಾಗಿ ಅವರ ನಾಮಪತ್ರ ತಿರಸ್ಕೃತಗೊಂಡಿದೆ. ಜೆಡಿ ಎಸ್ ನ ಇನ್ನೋರ್ವ ಅಭ್ಯರ್ಥಿ ರಾಧಾಕೃಷ್ಣ ಅವರ ನಾಮಪತ್ರ ಊರ್ಜಿತವಾಗಿದೆ ಎಂದು ತಿಳಿದು ಬಂದಿದೆ.