ಸತೀಶ್ ಜಾರಕಿಹೊಳಿ, ಕೆ.ಪಿ.ಬಚ್ಚೇಗೌಡ ನಾಮಪತ್ರ ತಿರಸ್ಕೃತ

Update: 2019-11-19 09:57 GMT

ಬೆಂಗಳೂರು, ನ.19: ಗೋಕಾಕ್  ವಿಧಾನ ಸಭಾ ಕ್ಷೇತ್ರದಿಂದ ಉಪಚುನಾವಣೆಗೆ  ನಾಮಪತ್ರ ಸಲ್ಲಿಸಿದ್ದ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಮತ್ತು  ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಜೆಡಿಎಸ್ ನ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ  ಕೆ.ಪಿ .ಬಚ್ಚೇಗೌಡ ಅವರ  ನಾಮಪತ್ರಗಳು ಇಂದು  ಪರಿಶೀಲನೆ ವೇಳೆ ತಿರಸ್ಕೃತಗೊಂಡಿವೆ.

ಸತೀಶ್ ಜಾರಕಿಹೋಳಿ ಕಾಂಗ್ರೆಸ್ ಪಕ್ಷದ  ಅಭ್ಯರ್ಥಿ ಎಂದು  ನಾಮಪತ್ರ ಸಲ್ಲಿಸಿದ್ದರು. ಆದರೆ ಅವರು ನಾಮಪತ್ರದ ಜತೆ ಬಿ ಫಾರ್ಮ್  ಸಲ್ಲಿಸಿರಲಿಲ್ಲ. ಈ  ಕಾರಣಕ್ಕಾಗಿ ನಾಮಪತ್ರ ತಿರಸ್ಕೃತಗೊಂಡಿದೆ. ಒಂದೇ ಬಿ ಫಾರ್ಮ್ ನಲ್ಲಿ ಇಬ್ಬರ ಹೆಸರು ಬರೆಯಲಾಗಿತ್ತು. ಈ ಕಾರಣದಿಂದಾಗಿ ಅವರ ನಾಮಪತ್ರ ತಿರಸ್ಕೃತಗೊಂಡಿದೆ.   ಜೆಡಿ ಎಸ್ ನ  ಇನ್ನೋರ್ವ ಅಭ್ಯರ್ಥಿ  ರಾಧಾಕೃಷ್ಣ  ಅವರ ನಾಮಪತ್ರ  ಊರ್ಜಿತವಾಗಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News