ಅಜಿತ್ ಪವಾರ್‌ರಿಂದ ಎನ್‌ಸಿಪಿ ಶಾಸಕರ ಸಹಿ ದುರ್ಬಳಕೆ : ನವಾಬ್ ಮಲಿಕ್

Update: 2019-11-23 16:04 GMT
PTI 

ಮುಂಬೈ, ನ.23: ಅಜಿತ್ ಪವಾರ್ ಎನ್‌ಸಿಪಿ ಶಾಸಕರ ಸಹಿಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಎನ್‌ಸಿಪಿ ವಕ್ತಾರ ನವಾಬ್ ಮಲಿಕ್ ಆರೋಪಿಸಿದ್ದಾರೆ.

ವಿಶ್ವಾಸದ್ರೋಹದ ಮೂಲಕ ಅಸ್ತಿತ್ವಕ್ಕೆ ಬಂದಿರುವ ಈ ಸರಕಾರ ವಿಶ್ವಾಸ ಮತ ಯಾಚನೆಯಲ್ಲಿ ವಿಫಲವಾಗಲಿದೆ. ಹಾಜರಾತಿ ಗುರುತಿಸಲು ಎನ್‌ಸಿಪಿ ಶಾಸಕರ ಸಹಿಯನ್ನು ಪಡೆಯಲಾಗಿತ್ತು. ಆದರೆ ಇದನ್ನು ಆಧಾರವಾಗಿಟ್ಟುಕೊಂಡು ಪ್ರಮಾಣ ವಚನ ಕಾರ್ಯಕ್ರಮ ನಡೆಸಲಾಗಿದೆ. ಅಜಿತ್ ಪವಾರ್ ಪಕ್ಷದ ಹಲವು ಶಾಸಕರಿಗೆ ವಿಷಯವೇ ತಿಳಿಸದೆ ಅವರನ್ನು ರಾಜಭವನಕ್ಕೆ ಕರೆದೊಯ್ಯಲಾಗಿದೆ.

ಅಜಿತ್ ಪವಾರ್ ತಮಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಪ್ರಮಾಣ ವಚನ ಕಾರ್ಯಕ್ರಮದ ಬಳಿಕ ಶರದ್ ಪವಾರ್‌ರನ್ನು ಭೇಟಿಯಾಗಿರುವ ಹಲವು ಶಾಸಕರು ಹೇಳಿದ್ದಾರೆ. ಎನ್‌ಸಿಪಿಯ ಎಲ್ಲಾ ಶಾಸಕರೂ ಒಗ್ಗಟ್ಟಿನಿಂದ ಇದ್ದು ಬಿಜೆಪಿಯನ್ನು ಬೆಂಬಲಿಸುವ ಪ್ರಶ್ನೆಯೇ ಇಲ್ಲ ಎಂದು ಮಲಿಕ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News