ಮಹಾರಾಷ್ಟ್ರದ ರಾಜಕೀಯ ನಾಟಕ: ಆಘಾತಕ್ಕೊಳಗಾದ ಅಧ್ಯಾಪಕ ಮಾಡಿದ್ದೇನು ಗೊತ್ತಾ ?

Update: 2019-11-24 17:38 GMT

ಮುಂಬೈ, ನ. 24: ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆ ನೋಡಿದ ಬಳಿಕ ತಾನು ಅನಾರೋಗ್ಯಕ್ಕೀಡಾಗಿದ್ದೇನೆ. ಆದುದರಿಂದ ತನಗೆ ರಜೆ ನೀಡುವಂತೆ ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯ ಗಡ್‌ಚಂಡೂರ್‌ನಲ್ಲಿರುವ ಕಾಲೇಜಿನ ಇಂಗ್ಲಿಷ್ ಪ್ರೊಫೆಸರ್ ಅರ್ಜಿ ಸಲ್ಲಿಸಿದ್ದಾರೆ.

ಮಹಾರಾಷ್ಟ್ರದ ರಾಜಕೀಯ ಭೂಕಂಪದಿಂದ ನಾನು ಸಂಪೂರ್ಣವಾಗಿ ಜರ್ಝರಿತನಾಗಿದ್ದೇನೆ ಎಂದು ಇಂಗ್ಲಿಷ್ ಪ್ರೊಫೆಸರ್ ಸೈಯ್ಯದ್ ಕಾಲೇಜಿನ ಪ್ರಾಂಶುಪಾಲರಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.

ರಾಜ್ಯದ ರಾಜಕೀಯ ನಾಟಕದ ಕುರಿತ ಸುದ್ದಿ ಗಮನಿಸಿದ ಬಳಿಕ ಇಂದು ಬೆಳಗ್ಗೆ ನಾನು ಆಘಾತಕ್ಕೊಳಗಾದೆ ಹಾಗೂ ಅನಾರೋಗ್ಯ ಕ್ಕೀಡಾದೆ ಎಂದು ಸೈಯ್ಯದ್ ಹೇಳಿದ್ದಾರೆ. ಸೈಯ್ಯದ್ ಅವರು ರಜೆಗೆ ಅರ್ಜಿ ಸಲ್ಲಿಸಿರುವುದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News