ಆಟೊ ವಲಯದಲ್ಲಿ ಹಿನ್ನಡೆಯಾಗಿಲ್ಲ ಎನ್ನುವುದಕ್ಕೆ ಟ್ರಾಫಿಕ್ ಜಾಮ್ ಗಳೇ ಸಾಕ್ಷಿ ಎಂದ ಬಿಜೆಪಿ ಸಂಸದ!

Update: 2019-12-05 15:24 GMT

ಹೊಸದಿಲ್ಲಿ: ಆಟೋ ವಲಯದಲ್ಲಿ ಹಿನ್ನಡೆ ಇಲ್ಲ ಎನ್ನುವುದಕ್ಕೆ ಟ್ರಾಫಿಕ್ ಜಾಮ್ ಗಳು ಸಾಕ್ಷಿಯಾಗಿವೆ. ದೇಶದ ಹೆಸರನ್ನು ಕೆಡಿಸಲು ಇಂತಹ ಆರೋಪಗಳನ್ನು ಹೊರಿಸಲಾಗುತ್ತದೆ ಎಂದು ಬಿಜೆಪಿ ಸಂಸದ ವಿರೇಂದ್ರ ಸಿಂಗ್ ಮಸ್ತ್ ಲೋಕಸಭೆಯಲ್ಲಿ ಹೇಳಿದ್ದಾರೆ.

"ದೇಶ ಮತ್ತು ಸರಕಾರದ ಹೆಸರಿಗೆ ಮಸಿ ಬಳಿಯಲು , ಆಟೋ ಮೊಬೈಲ್ ಕ್ಷೇತ್ರದಲ್ಲಿ ಹಿನ್ನಡೆಯಾಗಿದೆ ಎಂದು ಜನರು ಹೇಳುತ್ತಿದ್ದಾರೆ. ಒಂದು ವೇಳೆ ಆಟೊ ಕ್ಷೇತ್ರದಲ್ಲಿ ಹಿನ್ನಡೆ ಇದ್ದಿದ್ದರೆ ರಸ್ತೆಗಳಲ್ಲಿ ಅಷ್ಟೊಂದು ಟ್ರಾಫಿಕ್ ಜಾಮ್ ಏಕಿದೆ?" ಎಂದವರು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News