ಆರ್‌ಬಿಐ ಪ್ರಕಟಿಸಿದ ಕ್ರಮಗಳಿಂದ ನಿರಾಶೆಯಾಗಿದೆ: ಕಾಂಗ್ರೆಸ್

Update: 2020-04-17 14:41 GMT

ಹೊಸದಿಲ್ಲಿ,ಎ.17: ಆರ್ಥಿಕತೆಯನ್ನು ಬೆಂಬಲಿಸಲು ಆರ್‌ಬಿಐ ಶುಕ್ರವಾರ ಪ್ರಕಟಿಸಿರುವ ಕ್ರಮಗಳ ಬಗ್ಗೆ ನಿರಾಶೆಯನ್ನು ವ್ಯಕ್ತಪಡಿಸಿರುವ ಕಾಂಗ್ರೆಸ್,ಲಾಕ್‌ಡೌನ್‌ನಿಂದಾಗಿ ಸಂಕಷ್ಟದಲ್ಲಿರುವ ಬಡವರ ಸಮಸ್ಯೆಗಳನ್ನು ತಗ್ಗಿಸಲು ಸರಕಾರವು ಇನ್ನಷ್ಟು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದೆ.

ಆರ್‌ಬಿಐ ಪ್ರಕಟಿಸಿರುವ ಕ್ರಮಗಳಿಗೆ ಅರ್ಥವಿಲ್ಲ. ಇವು ಕಾಂಗ್ರೆಸ್ ಮತ್ತು ಜನರಿಗೆ ನಿರಾಶೆಯನ್ನುಂಟು ಮಾಡಿವೆ. ಬಡವರು ಮತ್ತು ದುರ್ಬಲರ ಸಮಸ್ಯೆಗಳನ್ನು ಬಗೆಹರಿಸಲು ಸರಕಾರವು ಇನ್ನಷ್ಟು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹಿರಿಯ ಕಾಂಗ್ರೆಸ್ ನಾಯಕ ಅಜಯ ಮಾಕೆನ್ ಅವರು ವೀಡಿಯೊ ಲಿಂಕ್ ಮೂಲಕ ನಡೆಸಿದ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಆರ್‌ಬಿಐ ಶುಕ್ರವಾರ ಸುಸ್ತಿಸಾಲಗಳ ನಿಯಮಗಳನ್ನು ಇನ್ನಷ್ಟು ಸಡಿಲಿಸಿದ್ದು,ಬ್ಯಾಂಕುಗಳು ಲಾಭಾಂಶ ವಿತರಿಸುವುದಕ್ಕೆ ತಡೆಯನ್ನು ವಿಧಿಸಿದೆ. ರಿವರ್ಸ್ ರೆಪೊ ದರವನ್ನು 25 ಮೂಲ ಅಂಕಗಳಷ್ಟು ಕಡಿತಗೊಳಿಸುವ ಮೂಲಕ ಬ್ಯಾಂಕುಗಳು ಹೆಚ್ಚು ಸಾಲಗಳನ್ನು ನೀಡಲು ಅವಕಾಶ ಕಲ್ಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News