ರಕ್ಷಣಾ ಪಡೆಗಳ ಮುಖ್ಯಸ್ಥ ಹಾಗು ಎಲ್ಲಾ ಸೇನೆಗಳ ಮುಖ್ಯಸ್ಥರಿಂದ ಇಂದು ಸಂಜೆ 6 ಗಂಟೆಗೆ ಪತ್ರಿಕಾಗೋಷ್ಠಿ

Update: 2020-05-01 11:03 GMT
ರಕ್ಷಣಾ ಪಡೆಗಳ ವರಿಷ್ಠ ಜನರಲ್ ಬಿಪಿನ್ ರಾವತ್

ಹೊಸದಿಲ್ಲಿ: ಭಾರತದ ರಕ್ಷಣಾ ಪಡೆಗಳ ಮುಖ್ಯಸ್ಥ, ಜನರಲ್ ಬಿಪಿನ್ ರಾವತ್ ಅವರು ಮೂರೂ ಸೇನಾ ಪಡೆಗಳ ಮುಖ್ಯಸ್ಥರೊಂದಿಗೆ ಇಂದು ಸಂಜೆ ಆರು ಗಂಟೆಗೆ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ. ಇಡೀ ದೇಶವೇ ಕೊರೋನವೈರಸ್ ಹಾವಳಿಯಿಂದಾಗಿ ಲಾಕ್ ಡೌನ್‍ನಲ್ಲಿರುವ ಇಂತಹ ಸಂದರ್ಭದಲ್ಲಿ ಈ ಪತ್ರಿಕಾಗೋಷ್ಠಿಯ ಆಯೋಜನೆ ಸಾಕಷ್ಟು ಕುತೂಹಲ ಕೆರಳಿಸಿದೆ.

ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಆಗಿ ಜನರಲ್ ಬಿಪಿನ್ ರಾವತ್ ಅವರು  ನೇಮಕಗೊಂಡ ನಂತರ  ಮೂರೂ ಸೇನಾ ಪಡೆಗಳ ಮುಖ್ಯಸ್ಥರ ಜತೆ ಸೇರಿ ಅವರು ನಡೆಸುವ ಮೊದಲ ಪತ್ರಿಕಾಗೋಷ್ಠಿ ಇದಾಗಿದೆ.

“ದೇಶವು ಕೋವಿಡ್-19 ವಿರುದ್ಧ ಹೋರಾಡುತ್ತಿರುವ ಇಂತಹ ಸಂದರ್ಭದಲ್ಲಿ  ರಕ್ಷಣಾ ಪಡೆಗಳು  ತಮ್ಮ ಕಾರ್ಯವ್ಯಾಪ್ತಿಯನ್ನು ಮೀರಿ  ಸಾಧ್ಯವಾದಷ್ಟು ಮಟ್ಟಿಗೆ ಸರಕಾರ ಮತ್ತು ಜನರಿಗೆ ಬೆಂಬಲ ನೀಡಬೇಕಿದೆ,'' ಎಂದು ಅವರು ಹೇಳಿದ್ದರು. “ಶಿಸ್ತು ಮತ್ತು ಸಂಯಮ''ದಿಂದಾಗಿ ರಕ್ಷಣಾ ಪಡೆಗಳಿಗೆ ಕೊರೋನ ಹಾವಳಿಯನ್ನು ತಡೆಗಟ್ಟುವುದು ಸಾಧ್ಯವಾಗಿದೆ ಹಾಗೂ  ಕೋವಿಡ್-19 ರಕ್ಷಣಾ ಪಡೆಗಳನ್ನು ಸೀಮಿತವಾಗಿ ಬಾಧಿಸಿದೆ,'' ಎಂದೂ ಅವರು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News