ನಾಲ್ವರು ಐಪಿಎಸ್ ಅಧಿಕಾರಿಗಳ ವರ್ಗಾವಣೆ

Update: 2022-01-19 15:56 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜ. 19: ರಾಜ್ಯ ಸರಕಾರ ಆಡಳಿತದ ಹಿತದೃಷ್ಟಿಯಿಂದ ನಾಲ್ವರು ಐಪಿಎಸ್ ಅಧಿಕಾರಿಗಳನ್ನು ತಮ್ಮ ಹೆಸರಿನ ಮುಂದಿನ ಸೂಚಿತ ಸ್ಥಳಕ್ಕೆ ತಕ್ಷಣವೇ ನಿಯೋಜನೆಗೊಳ್ಳುವಂತೆ ವರ್ಗಾವಣೆ ಮಾಡಿ ಬುಧವಾರ ಆದೇಶ ಹೊರಡಿಸಿದೆ.

ಕೆ.ಎನ್. ಸಂತೋಷ್ ಬಾಬು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ(ಎಸ್ಪಿ) ರಾಮನಗರ, ಜಿ.ರಾಧಿಕಾ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಭದ್ರತೆ), ಎಸ್.ಗಿರೀಶ್ ಸೂಪರಿಡೆಂಟ್ ಉಪಪೊಲೀಸ್ ಆಯುಕ್ತ(ಡಿಸಿಪಿ) ವೈಟ್‍ಫೀಲ್ಡ್ ಖಾಲಿ ಹುದ್ದೆಗೆ ಹಾಗೂ ಕೆ.ಪರಶುರಾಮ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ(ಎಸ್ಪಿ) ಚಿತ್ರದುರ್ಗ ಇಲ್ಲಿಗೆ ವರ್ಗಾವಣೆ ಮಾಡಿ ಆದೇಶಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News