ಮೇಲುಕೋಟೆ ರಾಯಗೋಪುರ ಬಳಿ ತೆಲುಗು ಚಿತ್ರೀಕರಣಕ್ಕೆ ನೀಡಿದ್ದ ಅನುಮತಿ ರದ್ದು

Update: 2022-10-09 13:54 GMT

ಮಂಡ್ಯ, ಅ.9: ಬಾರ್ ಕೌಂಟರ್ ಸೆಟ್ ನಿರ್ಮಾಣದ ಹಿನ್ನೆಲೆಯಲ್ಲಿ ಪುರಾಣ ಪ್ರಸಿದ್ಧ ಸ್ಥಳವಾದ ಮೇಲುಕೋಟೆಯ ರಾಯಗೋಪುರದ ಬಳಿ ತೆಲುಗು ಚಿತ್ರದ ಚಿತ್ರೀಕರಣಕ್ಕೆ ನೀಡಿದ್ದ ಅನುಮತಿಯನ್ನು ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ರದ್ದುಗೊಳಿಸಿದೆ.

ಅ.8ರಂದು ರಾಯಗೋಪುರದ ಬಳಿ ನಡೆದ ಚಿತ್ರೀಕರಣದಲ್ಲಿ ಸ್ಮಾರಕದ ಆವರಣವನ್ನು ಮದುವೆಯ ಆರತಕ್ಷತೆಯ ರೀತಿ ಮತ್ತು ಮತ್ತೊಂದು ಸ್ಥಳದಲ್ಲಿ ಬಾರ್ ಕೌಂಟರ್ ಸೆಟ್ ಹಾಕಿ ಸ್ಮಾರಕದ ಸಂಸ್ಕೃತಿಗೆ ಧಕ್ಕೆ ತರಲಾಗಿದೆ ಎಂದು ಇಲಾಖೆಯ ಆಯುಕ್ತ ಎ.ದೇವರಾಜು ಹೇಳಿದ್ದಾರೆ.

ಕೂಡಲೇ ಜಾರಿಗೆ ಬರುವಂತೆ ಚಿತ್ರೀಕರಣಕ್ಕೆ ನೀಡಿರುವ ಅನುಮತಿಯನ್ನು ರದ್ದುಗೊಳಿಸಿ, ಚಿತ್ರೀಕರಣಕ್ಕೆ ವಿಧಿಸಿರುವ ಶುಲ್ಕವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಸ್ಮಾರಕದ ಆವರಣದಲ್ಲಿ ಅಳವಡಿಸಿರುವ ಸೆಟ್‍ಗಳನ್ನು ತೆರವುಗೊಳಿಸಬೇಕು ಎಂದು ಅವರು ಚಿತ್ರನಿರ್ಮಾಣ ಸಂಸ್ಥೆ ಹೈದರಾಬಾದ್‍ನ ಶ್ರೀನಿವಾಸ ಸಿಲ್ವರ್ ಸ್ಕ್ರೀನ್‍ಗೆ ಆದೇಶಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News