ಕನ್ನಡ ರಾಜ್ಯೋತ್ಸವ; ಜಿಲ್ಲಾ ಕೇಂದ್ರಗಳಲ್ಲಿ ಧ್ವಜಾರೋಹಣಕ್ಕೆ ಸಚಿವರ ನೇಮಕ

Update: 2022-10-27 14:21 GMT

ಬೆಂಗಳೂರು, ಅ.27: ಕನ್ನಡ ರಾಜ್ಯೋತ್ಸವ ದಿನಾಚರಣೆ ಪ್ರಯುಕ್ತ ನ.1ರಂದು ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ(ಬೆಂಗಳೂರು ನಗರ ಜಿಲ್ಲೆಯನ್ನು ಹೊರತುಪಡಿಸಿ) ಧ್ವಜಾರೋಹಣ ಮಾಡಲು ಸಚಿವರು ಹಾಗೂ ಜಿಲ್ಲಾಧಿಕಾರಿಗಳನ್ನು ಸರಕಾರ ನೇಮಿಸಿದೆ.

ಬೆಳಗಾವಿ-ಗೋವಿಂದ ಕಾರಜೋಳ, ಬಳ್ಳಾರಿ-ಬಿ.ಶ್ರೀರಾಮುಲು, ಚಾಮರಾಜನಗರ-ವಿ.ಸೋಮಣ್ಣ, ಉಡುಪಿ-ಎಸ್.ಅಂಗಾರ, ತುಮಕೂರು-ಆರಗ ಜ್ಞಾನೇಂದ್ರ, ರಾಮನಗರ-ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಬಾಗಲಕೋಟೆ-ಸಿ.ಸಿ.ಪಾಟೀಲ್, ಕೊಪ್ಪಳ-ಆನಂದ್ ಸಿಂಗ್, ಉತ್ತರ ಕನ್ನಡ-ಕೋಟ ಶ್ರೀನಿವಾಸ ಪೂಜಾರಿ, ಯಾದಗಿರಿ-ಪ್ರಭು ಚೌವ್ಹಾಣ್, ಕಲಬುರಗಿ-ಮುರುಗೇಶ್ ನಿರಾಣಿ.

ಹಾವೇರಿ-ಅರಬೈಲ್ ಶಿವರಾಮ್ ಹೆಬ್ಬಾರ್, ಮೈಸೂರು-ಎಸ್.ಟಿ.ಸೋಮಶೇಖರ್, ಚಿತ್ರದುರ್ಗ-ಬಿ.ಸಿ.ಪಾಟೀಲ್, ದಾವಣಗೆರೆ-ಬಿ.ಎ.ಬಸವರಾಜ(ಭೈರತಿ), ಬೆಂಗಳೂರು ಗ್ರಾಮಾಂತರ-ಡಾ.ಕೆ.ಸುಧಾಕರ್, ಹಾಸನ-ಕೆ.ಗೋಪಾಲಯ್ಯ, ವಿಜಯನಗರ-ಶಶಿಕಲಾ ಜೊಲ್ಲೆ, ಚಿಕ್ಕಬಳ್ಳಾಪುರ-ಎನ್.ನಾಗರಾಜು(ಎಂ.ಟಿ.ಬಿ), ಶಿವಮೊಗ್ಗ-ಕೆ.ಸಿ.ನಾರಾಯಣಗೌಡ, ಕೊಡಗು-ಬಿ.ಸಿ.ನಾಗೇಶ್.

ದಕ್ಷಿಣ ಕನ್ನಡ-ವಿ.ಸುನೀಲ್ ಕುಮಾರ್, ಧಾರವಾಡ-ಆಚಾರ್ ಹಾಲಪ್ಪ ಬಸಪ್ಪ, ರಾಯಚೂರು-ಶಂಕರ್ ಪಾಟೀಲ್ ಮುನೇನಕೊಪ್ಪ, ಕೋಲಾರ-ಮುನಿರತ್ನ, ಮಂಡ್ಯ-ಆರ್.ಅಶೋಕ್, ವಿಜಯಪುರ-ಜಿಲ್ಲಾಧಿಕಾರಿ, ಗದಗ-ಜಿಲ್ಲಾಧಿಕಾರಿ, ಬೀದರ್-ಜಿಲ್ಲಾಧಿಕಾರಿ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯನ್ನು ಧ್ವಜಾರೋಹಣ ನೆರವೇರಿಸಲು ನೇಮಿಸಲಾಗಿದೆ.

ಅನಾರೋಗ್ಯ ಅಥವಾ ಇತರೆ ಕಾರಣಗಳಿಂದಾಗಿ ಸಚಿವರು ಧ್ವಜಾರೋಹಣ ಕಾರ್ಯಕ್ರಮಕ್ಕೆ ಅನುಪಸ್ಥಿತರಿದ್ದಲ್ಲಿ, ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಧ್ವಜಾರೋಹಣ ಮಾಡುವಂತೆ ರಾಜ್ಯ ಸರಕಾರ ಸೂಚನೆ ನೀಡಿದೆ.

Similar News