‘ಜಿಎಸ್‍ಎಸ್ ವಿಮರ್ಶಾ ಪ್ರಶಸ್ತಿ’ಗೆ ಡಾ.ನಟರಾಜ್ ಹುಳಿಯಾರ್, ಡಾ.ಬಂಜಗೆರೆ ಜಯಪ್ರಕಾಶ್ ಆಯ್ಕೆ

Update: 2022-11-18 16:01 GMT

ಬೆಂಗಳೂರು, ನ. 18: ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ ಪ್ರತಿಷ್ಠಾನದ ವತಿಯಿಂದ ‘ಜಿಎಸ್‍ಎಸ್’ ಅವರ ಹೆಸರಿನಲ್ಲಿ ಕೊಡಮಾಡುವ ಪ್ರತಿಷ್ಠಿತ ‘ಜಿಎಸ್‍ಎಸ್ ವಿಮರ್ಶಾ ಪ್ರಶಸ್ತಿ’ಗೆ ಹಿರಿಯ ಸಾಹಿತಿ ಡಾ.ನಟರಾಜ್ ಹುಳಿಯಾರ್ ಹಾಗೂ ಸಂಸ್ಕೃತಿ ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್ ಅವರು ಆಯ್ಕೆಯಾಗಿದ್ದಾರೆ.

ಲೇಖಕ ನಟರಾಜ್ ಬೂದಾಳ್ ಅಧ್ಯಕ್ಷತೆಯ ಆಯ್ಕೆ ಸಮಿತಿ ಜಿಎಸ್‍ಎಸ್ ಪ್ರಶಸ್ತಿಗೆ ನಟರಾಜ್ ಹುಳಿಯಾರ್ ಹಾಗೂ ಬಂಜಗೆರೆ ಜಯಪ್ರಕಾಶ್ ಅವರನ್ನು ಆಯ್ಕೆ ಮಾಡಿದ್ದು, 2023ರ ಫೆಬ್ರವರಿ 7ರಂದು ಜಿಎಸ್‍ಎಸ್ ಅವರ ಜನ್ಮದಿನದ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಜಿಎಸ್‍ಎಸ್ ಪ್ರಶಸ್ತಿಯೂ ತಲಾ 15 ಸಾವಿರ ರೂಪಾಯಿ ನಗದು, ಸ್ಮರಣಿಕೆ ಒಳಗೊಂಡಿದೆ.

ಜಿಎಸ್‍ಎಸ್ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಾಗಿ ಹಿರಿಯ ಲೇಖಕರಾದ ಬಸವರಾಜ ಕಲ್ಗುಡಿ, ಶೂದ್ರ ಶ್ರೀನಿವಾಸ್, ಎಂ.ಎಸ್.ಆಶಾದೇವಿ ಸೇರಿದಂತೆ ಇನ್ನಿತರರು ಇದ್ದರು ಎಂದು ಜಿಎಸ್‍ಎಸ್ ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ.

Similar News