ಬೊಮ್ಮಾಯಿ ಸರ್ಕಾರದಿಂದಾಗಿ ಬಿಜೆಪಿಗರಿಗೆ ಜನ ಓಡಾಡಲು ಬಿಡದಂತ ಸ್ಥಿತಿ...: ಕಾಂಗ್ರೆಸ್
ಬೆಂಗಳೂರು, ಡಿ.6: 'ರಾಜ್ಯದಲ್ಲಿರುವ ಭ್ರಷ್ಟ ಹಾಗೂ ನಿಷ್ಕ್ರಿಯ ಸರಕಾರದಿಂದ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರಿಗೆ ಜನ ಓಡಾಡಲು ಜನ ಓಡಾಡಲು ಬಿಡದಂತ ಸ್ಥಿತಿ ಸದ್ಯದಲ್ಲೇ ಬರಲಿದೆ' ಎಂದು ಕಾಂಗ್ರೆಸ್ ಟೀಕಿಸಿದೆ.
ಇತ್ತೀಚೆಗೆ ಬಿಜೆಪಿ ಶಾಸಕರನ್ನು ಜನರು ತರಾಟೆಗೆ ತೆಗೆದುಕೊಂಡಿದ್ದನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಈಗಾಗಲೇ ಬಿಜೆಪಿಯ ಅನೇಕರು ಜಾನಾಕ್ರೋಶದ ದರ್ಶನ ಪಡೆದಿದ್ದಾರೆ, ರಾಜ್ಯದಲ್ಲಿರುವ ಭ್ರಷ್ಟ ಹಾಗೂ ನಿಷ್ಕ್ರಿಯ ಬಿಜೆಪಿ ಸರ್ಕಾರದಿಂದಾಗಿ ಬಿಜೆಪಿಗರಿಗೆ ಜನ ಓಡಾಡಲು ಬಿಡದಂತ ಸ್ಥಿತಿ ಸದ್ಯದಲ್ಲೇ ಬರಲಿದೆ' ಎಂದು ಹೇಳಿದೆ.
''ನಿಮ್ಮ ದುರಾಡಳಿತಕ್ಕೆ ಜನರ ಈ ಆಕ್ರೋಶವೇ ಕನ್ನಡಿಯಾಗಿದೆ, ಒಮ್ಮೆ ಮುಖ ನೋಡಿಕೊಳ್ಳಿ'' ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕಾಂಗ್ರೆಸ್ ಪ್ರಶ್ನೆ ಮಾಡಿದೆ.
''ಗರ್ಭಿಣಿ ಸ್ತ್ರೀಯರಿಗೆ ಪೌಷ್ಠಿಕ ಆಹಾರದ ಕಿಟ್ ವಿತರಿಸುತ್ತೇವೆ ಬಿಜೆಪಿ ಜನರಿಗೆ ಭರವಸೆ ಕೊಟ್ಟಿತ್ತು. ಆದರೆ ಈಗ ಪೌಷ್ಠಿಕ ಆಹಾರದ ಕಿಟ್ಗಳೂ ಇಲ್ಲ, ನಮ್ಮ ಸರ್ಕಾರ ಜಾರಿಗೆ ತಂದಿದ್ದ ಮಾತೃಪೂರ್ಣ ಯೋಜನೆಗೆ ಅನುದಾನವೂ ಇಲ್ಲ. ಅಪೌಷ್ಟಿಕತೆಯಿಂದ ಶಿಶುಗಳ ಹಾಗೂ ತಾಯಂದಿರ ಮರಣ ಪ್ರಮಾಣ ಹೆಚ್ಚಿದರೂ ಸರ್ಕಾರ ತಲೆಕೆಡಿಸಿಕೊಂಡಿಲ್ಲವೇಕೆ?'' ಎಂದು ಕಾಂಗ್ರೆಸ್ ಕಿಡಿಕಾರಿದೆ.
ಈಗಾಗಲೇ ಬಿಜೆಪಿಯ ಅನೇಕರು ಜಾನಾಕ್ರೋಶದ ದರ್ಶನ ಪಡೆದಿದ್ದಾರೆ, ಈಗ ಶಾಸಕ ರಾಮಣ್ಣ ಲಮಾಣಿ ಸರದಿ.
— Karnataka Congress (@INCKarnataka) December 6, 2022
ಭ್ರಷ್ಟ ಹಾಗೂ ನಿಷ್ಕ್ರಿಯ @BJP4Karnataka ಸರ್ಕಾರದಿಂದಾಗಿ ಬಿಜೆಪಿಗರಿಗೆ ಜನ ಓಡಾಡಲು ಬಿಡದಂತ ಸ್ಥಿತಿ ಸದ್ಯದಲ್ಲೇ ಬರಲಿದೆ.@BSBommai ಅವರೇ, ನಿಮ್ಮ ದುರಾಡಳಿತಕ್ಕೆ ಜನರ ಈ ಆಕ್ರೋಶವೇ ಕನ್ನಡಿಯಾಗಿದೆ, ಒಮ್ಮೆ ಮುಖ ನೋಡಿಕೊಳ್ಳಿ. pic.twitter.com/tT5oa1ncaR