ಸಿ.ಟಿ.ರವಿ ‘ಗುಜರಾತ್ ಗಾಂಜಾ’ ಸೇವಿಸಿ ಸದನಕ್ಕೆ ಬರುತ್ತಾರೆ: ಬಿ.ಕೆ.ಹರಿಪ್ರಸಾದ್

Update: 2022-12-22 14:43 GMT

ಬೆಳಗಾವಿ, ಡಿ.22: ಬಿಜೆಪಿ ನಾಯಕ ಗುಜರಾತ್‍ನಲ್ಲಿ ದೊರೆಯುವ ಉಚಿತ ಮಾದಕ ವಸ್ತು ಗಾಂಜಾ ಸೇವಿಸಿ ಸದನಕ್ಕೆ ಬರುತ್ತಾರೆ ಎಂದು ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಗಂಭೀರ ಆರೋಪ ಮಾಡಿದ್ದಾರೆ.

ಗುರುವಾರ ಬೆಳಗಾವಿಯ ಸುವರ್ಣಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ.ಟಿ.ರವಿ ಅವರು ಮಾಧ್ಯಮಗಳ ಮುಂದೆ ಮಾತನಾಡಲು ಬರುವಾಗ ಮದ್ಯ ಸೇವನೆ ಮಾಡಿಕೊಂಡು ಬರುತ್ತಾರೆ.ಆದರೆ, ಸದನ ಸಂದರ್ಭದಲ್ಲಿ ಮದ್ಯದ ಜೊತೆಗೆ ಗಾಂಜಾವನ್ನೂ ಸೇವಿಸಿ ಬರುತ್ತಾರೆ ಎಂದು ಹೇಳಿದರು.

ಕೊಲೆ ಮಾಡುವವರು, ಕುಡುಕರಿಗೆ ಕೆಲವು ಕಡೆ ಕ್ಷಮಾಪಣೆ ಇದೆ.ಹಾಗೇ ಗಾಂಜಾ ವ್ಯಸನಿಗಳಿಗೂ ಕ್ಷಮಾಪಣೆ ಸಿಕ್ಕಿದೆ.ಹೀಗಾಗಿ, ಪ್ರವೇಶ ನೀಡಬೇಕಾಗಿದೆ ಎಂದು ಸಿ.ಟಿ.ರವಿ ಹೆಸರು ಉಲ್ಲೇಖಿಸಿ ಆಪಾದಿಸಿದರು.

Similar News