ಪೊಲೀಸ್ ಸಿಬ್ಬಂದಿ ಅಂತರ್ ಜಿಲ್ಲಾ ವರ್ಗಾವಣೆಗೆ ಅವಕಾಶ; ಸಂಪುಟ ಸಭೆಯಲ್ಲಿ ತೀರ್ಮಾನ

Update: 2022-12-22 16:28 GMT

ಬೆಳಗಾವಿ(ಸುವರ್ಣ ವಿಧಾನಸೌಧ), ಡಿ.22: ಬಹಳ ದಿನಗಳ ಬೇಡಿಕೆಯಾಗಿ ಉಳಿದಿದ್ದ, ಪೊಲೀಸ್ ಇಲಾಖೆಯ ಸಿಬ್ಬಂದಿಗಳಿಗೆ ನಿರ್ಬಂಧಿತ ವಾಗಿದ್ದ  ಅಂತರ್ ಜಿಲ್ಲಾ  ವರ್ಗಾವಣೆಗೆ ಅವಕಾಶ ಕೊಡುವ ನಿರ್ಧಾರವನ್ನು  ಇಂದಿನ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಮುಂದೆ ಈ ವಿಷಯ ಪ್ರಸ್ತಾಪಿಸಿದ ಗೃಹ ಸಚಿವ  ಆರಗ ಜ್ಞಾನೇಂದ್ರ, ಅನುಮತಿ ಕೋರಿದ್ದರು.

ಇಲಾಖೆಯಲ್ಲಿ, ಯಾವುದೇ ಒಂದು ಜಿಲ್ಲೆ ಯಲ್ಲಿ, ನೇಮಕಾತಿ ಹೊಂದಿದ ಹಾಗೂ ಅದೇ ಜಿಲ್ಲೆಯಲ್ಲಿ ಏಳು ವರ್ಷಗಳ ಕಾಲ ಸೇವೆ ಸಲ್ಲಿಸಿದ ಯಾವುದೇ ಸಿಬ್ಬಂದಿ, ಇತರೆ ಜಿಲ್ಲೆಗಳು ಅಥವಾ ತಮ್ಮ. ಸ್ವಂತ ಜಿಲ್ಲೆಗೆ, ವರ್ಗಾವಣೆ ಹೊಂದಲು, ಅರ್ಹತೆ ಪಡೆಯಲಿದ್ದಾರೆ, ಹಾಗೂ ಕೆಲವು ಷರತ್ತುಗಳು ಅನ್ವಯ ವಾಗುತ್ತವೆ.

ಅದೇ ರೀತಿಯಾಗಿ, ಪೊಲೀಸ್ ಇಲಾಖೆಗೆ ನೇಮಕವಾದ  ಹಾಗೂ ಕನಿಷ್ಠ ಮೂರು ವರ್ಷಗಳ ಸೇವೆ ಸಲ್ಲಿಸಿದ,  ಮಾಜಿ ಯೋಧರು, ಸಹ  ಬೇರೆ ಜಿಲ್ಲೆಗೆ ವರ್ಗಾವಣೆ ಕೊರಲೂ, ಇಂದಿನ ಸಚಿವ ಸಂಪುಟ ಸಭೆಯಲ್ಲಿ ಅನುಮತಿಸಲಾಗಿದೆ.

Similar News