‘ಮತ್ಸ್ಯಾಶ್ರಯ ಯೋಜನೆ’ಯಡಿ ಮನೆ ನಿರ್ಮಿಸುವ ಮೊತ್ತ 3ಲಕ್ಷ ರೂ.ಹೆಚ್ಚಳ: ಸಚಿವ ಎಸ್.ಅಂಗಾರ

Update: 2022-12-26 14:23 GMT

ಬೆಳಗಾವಿ, (ಸುವರ್ಣ ವಿಧಾನಸೌಧ) ಡಿ. 26: ‘ಮತ್ಸ್ಯಾಶ್ರಯ ಯೋಜನೆಯಡಿ ಬಡ ಮೀನುಗಾರರಿಗೆ ಮನೆ ನಿರ್ಮಿಸಲು ನೀಡುತ್ತಿರುವ ಮೊತ್ತವನ್ನು 3ಲಕ್ಷ ರೂ.ಗಳಿಗೆ ಹೆಚ್ಚಿಸಲು ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಮೀನುಗಾರಿಕೆ ಸಚಿವ ಎಸ್.ಅಂಗಾರ ತಿಳಿಸಿದ್ದಾರೆ.

ಸೋಮವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಆಡಳಿತ ಪಕ್ಷದ ಸದಸ್ಯ ಹಾಲಾಡಿ ಶ್ರೀನಿವಾಸ ಶೆಟ್ಟಿ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರ ನೀಡಿದ ಅವರು, ‘ಕಚ್ಚಾ ವಸ್ತುಗಳ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಪ್ರಸ್ತುತ ನೀಡುತ್ತಿರುವ 1.20ಲಕ್ಷ ರೂ.ನೀಡಿದರೆ ಆ ಮೊತ್ತದಲ್ಲಿ ಮನೆಯ ಅಡಿಪಾಯ ಹಾಕಲು ಸಾಧ್ಯವಿಲ್ಲ. ಆ ಮೊತ್ತವನ್ನು 3ಲಕ್ಷ ರೂ.ಗಳಿಗೆ ಏರಿಕೆ ಮಾಡಲಾಗುವುದು’ ಎಂದರು.

Similar News