ಎಚ್.ಡಿ.ಕೋಟೆ | ನಾರಹೊಳೆ ಅರಣ್ಯ ಪ್ರದೇಶದಲ್ಲಿ ಹುಲಿ ದಾಳಿ: ಸೌದೆ ಆಯಲು ಹೊಗಿದ್ದ ಯುವಕ ಸಾವು

Update: 2023-01-22 15:46 GMT

ಮೈಸೂರು,ಜ.22: ಮೈಸೂರುಜಿಲ್ಲೆ ಎಚ್.ಡಿ.ಕೋಟೆ ವ್ಯಾಪ್ತಿಯ ನಾಗರಹೊಳೆಯ ಬಳ್ಳೆ ಅರಣ್ಯ ಪ್ರದೇಶದಲ್ಲಿ ಸೌದೆ ಆಯಲು ಹೋಗಿದ್ದ 18 ವರ್ಷದ ಯುವಕನ್ನು ಹುಲಿಯೊಂದು ಕೊಂದು ಹಾಕಿರುವ ಘಟನೆ ರವಿವಾರ ನಡೆದಿರುವ ಬಗ್ಗೆ ವರದಿಯಾಗಿದೆ. 

ಸುಮಾರು 18 ವರ್ಷದ ಯುವಕ ಮಂಜು ಹುಲಿಯ ದಾಳಿಗೆ ಸಿಲುಕಿ ಬಲಿಯಾಗಿದ್ದಾನೆ. ಸೌದೆತರಲುಕಾಡಿಗೆ ಹೋಗಿದ್ದಾಗ ಹುಲಿ ಮಂಜುವನ್ನುಕೊಂದು ಹಾಕಿದೆ.ಈ ಬಗ್ಗೆ ಅಂತರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣದಾಖಲಾಗಿದೆ.

ಕಳೆದ ಮೂರು ದಿನದಲ್ಲಿಕಾಡು ಪ್ರಾಣಿಗಳಿಗೆ ಇದು ಮೂರನೇ ಬಲಿಯಾಗಿದೆ. ತಿ.ನರಸೀಪುರ ತಾಲೂಕಿನಲ್ಲಿ 60 ವರ್ಷದ ಮಹಿಳೆ, 11 ವರ್ಷದ ಬಾಲಕನನ್ನು ಚಿರತೆ ಕೊಂದು ಹಾಕಿದ್ದ ಘಟನೆ ಮಾಸುವ ಮುನ್ನ ನಾಗರಹೊಳೆ ಅರಣ್ಯ ಪ್ರದೇಶದಲ್ಲಿ ಯುವಕನೊಬ್ಬ ಹುಲಿಗೆ ಬಲಿಯಾಗಿರುವುದು ಕಾಡಂಚಿನ ಗ್ರಾಮಗಳ ಜನರನ್ನು ತಲ್ಲಣಗೊಳಿಸಿದೆ.

ಇದನ್ನೂ ಓದಿ: ತಿ.ನರಸೀಪುರ: ಚಿರತೆ ದಾಳಿಗೆ ಬಾಲಕ ಬಲಿ

Similar News