ಮಾನನಷ್ಟ ಪ್ರಕರಣ: ರಾಹುಲ್‌ ಗಾಂಧಿ ಖುದ್ದು ಹಾಜರಾಗಬೇಕೆಂಬ ಕೋರ್ಟ್‌ ಆದೇಶಕ್ಕೆ ಪಾಟ್ನಾ ಹೈಕೋರ್ಟ್‌ ತಡೆ

Update: 2023-04-24 09:50 GMT

ಹೊಸದಿಲ್ಲಿ: ಮೋದಿ ಉಪನಾಮೆ ಉಲ್ಲೇಖ ಸಂಬಂಧಿಸಿದಂತೆ ಮಾನಹಾನಿ ಪ್ರಕರಣ ಎದುರಿಸುತ್ತಿರುವ ಕಾಂಗ್ರೆಸ್‌ (Congress) ನಾಯಕ ರಾಹುಲ್‌ ಗಾಂಧಿ (Rahul Gandhi) ಅವರು ಖುದ್ದಾಗಿ ಹಾಜರಾಗಬೇಕು ಮತ್ತು ತಮ್ಮ  ಹೇಳಿಕೆ ನೀಡಬೇಕು ಎಂಬ ಕೆಳಗಿನ ಹಂತದ ನ್ಯಾಯಾಲಯದ ಆದೇಶಕ್ಕೆ ಪಾಟ್ನಾ ಹೈಕೋರ್ಟ್‌ ತಡೆಯಾಜ್ಞೆ ವಿಧಿಸಿದೆ. ಮುಂದಿನ ವಿಚಾರಣೆ ನಡೆಯುವ ಮೇ 15ರ ತನಕ ಈ ತಡೆಯಾಜ್ಞೆ ಊರ್ಜಿತದಲ್ಲಿರಲಿದೆ.

ಈ ಪ್ರಕರಣ ಈಗಾಗಲೇ ಸೂರತ್‌ ನ್ಯಾಯಾಲಯದ ಮುಂದಿರುವುದರಿಂದ ಬೇರೊಂದು ನ್ಯಾಯಾಲಯ ಅದೇ ಪ್ರಕರಣದ ವಿಚಾರಣೆ ನಡೆಸುವ ಹಾಗಿಲ್ಲ ಎಂದು ರಾಹುಲ್‌ ಗಾಂಧಿ ಅವರ ಕಾನೂನು ತಂಡ ಹೇಳಿದೆ. ನ್ಯಾಯಾಲಯ ನಂತರ ಈ ಕೋರಿಕೆಯನ್ನು ಒಪ್ಪಿ ರಾಹುಲ್‌ ಗಾಂಧಿಗೆ ಖುದ್ದು ಹಾಜರಾತಿಯಿಂದ ವಿನಾಯಿತಿ ನೀಡಿದೆ.

Similar News