ಖಾಲಿ ಆಸನ ಮೀಸಲಿರಿಸಿ ತೀಸ್ತಾ ಸೆಟಲ್ವಾಡ್ಗೆ ಗೌರವ
ಅಂತರ್ರಾಷ್ಟ್ರೀಯ ಲೇಖಕರ ಶಾಂತಿ ಸಮಾವೇಶ
ಹೊಸದಿಲ್ಲಿ, ಮೇ 22: ಖ್ಯಾತ ಮಾನವ ಹಕ್ಕುಗಳ ಹೋರಾಟಗಾರ್ತಿ ಹಾಗೂ ಲೇಖಕಿ ತೀಸ್ತಾ ಸೆಟಲ್ವಾಡ್ ಅವರಿಗೆ ಸ್ಲೋವೇನಿಯಾದ ಬ್ಲೆಡ್ ಪಟ್ಟಣದಲ್ಲಿ ಈ ವಾರ ನಡೆದ 55ನೇ ಇಂಟರ್ನ್ಯಾಷನಲ್ ರೈಟರ್ಸ್ ಫಾರ್ ಪೀಸ್ ಮೀಟಿಂಗ್ನಲ್ಲಿ ಖಾಲಿ ಆಸನ ಮೀಸಲಿರಿಸಿ ಗೌರವಿಸಲಾಯಿತು. ಮುಕ್ತ ವಾಕ್ ಸ್ವಾತಂತ್ರ ಪ್ರತಿಪಾದಿಸುವ ಜಾಗತಿಕ ಸಂಘಟನೆಯಾದ ಪೆನ್ (ಪಿಇಎನ್) ಇಂಟರ್ನ್ಯಾಷನಲ್ ಈ ಕಾರ್ಯಕ್ರಮ ಆಯೋಜಿಸಿತ್ತು.
ಪ್ರಸಕ್ತ ಜೈಲುವಾಸ ಅನುಭವಿಸುತ್ತಿರುವ, ಕಾನೂನುಕ್ರಮ ಎದುರಿಸುತ್ತಿರುವ ಅಥವಾ ನಾಪತ್ತೆಯಾಗಿರುವ ಲೇಖಕರಿಗೆ ಖಾಲಿ ಆಸನೞಮೀಸಲಿರಿಸುವ ಮೂಲಕ ಸಾಂಪ್ರದಾಯಿಕವಾಗಿ ಈ ಸಂಘಟನೆ ಗೌರವಿಸುತ್ತದೆ. 4ನೇ ಆಸನ ತೀಸ್ತಾ ಸೆಟಲ್ವಾಡ್ಗೆ ಮೀಸಲಿರಿಸಲಾಗಿತ್ತು. ಜಗತ್ತಿನಾದ್ಯಂತದ ಲೇಖಕರು ಹಾಗೂ ಹಕ್ಕುಗಳ ಪ್ರತಿಪಾದಕರಿಗೆ ಸ್ಲೋವೇನಿಯಾದಲ್ಲಿ ಪೆನ್ ಇಂಟರ್ನ್ಯಾಷನಲ್ 7 ಖಾಲಿ ಆಸನಗಳನ್ನು ಇರಿಸಿತ್ತು. ಅದರಲ್ಲಿ ಒಂದನ್ನು ನನಗೆ ಮೀಸಲಿರಿಸಿರುವುದರಿಂದ ಭಾವುಕನಾಗಿದ್ದೇನೆ ಎಂದು ತೀಸ್ತಾ ಸೆಟಲ್ವಾಡ್ ಟ್ವೀಟ್ ಮಾಡಿದ್ದಾರೆ. ಗುಜರಾತ್ ಹತ್ಯಾಕಾಂಡದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪಾತ್ರದ ಕುರಿತಂತೆ ಸೆಟಲ್ವಾಡ್ ಅವರು ಉಗ್ರ ಟೀಕಾಕಾರರಾಗಿದ್ದಾರೆ.
ಈ ಹತ್ಯಾಕಾಂಡದಲ್ಲಿ ಸಂತ್ರಸ್ತರಾದವರು ನ್ಯಾಯಕ್ಕಾಗಿ ನಡೆಸುತ್ತಿರುವ ಹೋರಾಟಕ್ಕೆ ಸೆಟಲ್ವಾಡ್ ಅವರು ಕಳೆದ ಎರಡು ದಶಕಗಳಿಂದ ಬೆಂಬಲ ನೀಡುತ್ತಿ ದ್ದಾರೆ. ಗುಜರಾತ್ ಹತ್ಯಾಕಾಂಡ ದಲ್ಲಿ ಆಗಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಹಾಗೂ ಬಿಜೆಪಿ ಕಾರ್ಯರ್ಕತರ ಪಾತ್ರವನ್ನು ಬಹಿರಂಗಪಡಿಸಲು ಕೂಡ ಅವರು ಪ್ರಯತ್ನಿಸುತ್ತಿದ್ದಾರೆ.