ಬೆಂಗಳೂರು | ಬೀದಿ ನಾಯಿಗಳ ಹಾವಳಿಗೆ ವೃದ್ಧೆ ಮೃತ್ಯು

Update: 2024-08-28 12:58 GMT

ಬೆಂಗಳೂರು : ಬೀದಿ ನಾಯಿಗಳ ಹಾವಳಿಗೆ ವೃದ್ಧೆಯೊಬ್ಬರು ಮೃತಪಟ್ಟಿರುವ ಘಟನೆ ಇಲ್ಲಿನ ಗಂಗಮ್ಮನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯ ಜಾಲಹಳ್ಳಿ ವಾಯುಸೇನೆ ನೆಲೆಯ 7ನೇ ವಸತಿ ಗೃಹಗಳ ಕ್ಯಾಂಪಸ್‍ನಲ್ಲಿ ವರದಿಯಾಗಿದೆ.

ರಾಜ್ ದುಲಾರಿ ಸಿನ್ಹಾ(76) ಎಂಬುವರನ್ನು ಮೃತಪಟ್ಟ ವೃದ್ಧೆ ಎಂದು ಗುರುತಿಸಲಾಗಿದೆ. ನಿವೃತ್ತಿ ಶಿಕ್ಷಕಿಯಾಗಿದ್ದ ರಾಜ್ ದುಲಾರಿ ಸಿನ್ಹಾ ಆ.28ರ ಬುಧವಾರ ಬೆಳಗ್ಗೆ ವಾಯುನೆಲೆ ಆವರಣದಲ್ಲಿ ವಾಕಿಂಗ್ ಮಾಡುವಾಗ ಏಕಾಏಕಿ 10ರಿಂದ 12 ನಾಯಿಗಳ ಗುಂಪು ವೃದ್ಧೆ ಮೇಲೆ ದಾಳಿ ಮಾಡಿವೆ. ಇದರಿಂದ ಗಂಭೀರ ಗಾಯಗೊಂಡಿದ್ದ ವೃದ್ಧೆಯನ್ನು ಕೂಡಲೇ ನಗರದ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರ ಅಳಿಯ ಜಾಲಹಳ್ಳಿಯ ವಾಯುನೆಲೆಯಲ್ಲಿ ಕೆಲಸ ಮಾಡುತ್ತಿದ್ದು, ಇವರು ನೀಡಿದ ದೂರಿನ ಮೇರೆಗೆ ಗಂಗಮ್ಮನಗುಡಿ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News