ಬಿಜೆಪಿ ಶಾಸಕ ಮುನಿರತ್ನ ಅವದ್ದು ವಿಕೃತ ಮನಸ್ಥಿತಿ : ಮುಹಮ್ಮದ್ ನಲಪಾಡ್

Update: 2024-09-20 16:30 GMT

ಬೆಂಗಳೂರು : ಬಿಜೆಪಿ ಶಾಸಕ ಮುನಿರತ್ನ ಅವರದ್ದು ವಿಕೃತ ಮನಸ್ಥಿತಿ. ಅವರನ್ನು ಕರ್ನಾಟಕ ರಾಜ್ಯದಿಂದ ಗಡಿಪಾರು ಮಾಡುವವರೆಗೂ ಬಿಡುವುದಿಲ್ಲ ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ಹಾರಿಸ್ ನಲಪಾಡ್ ತಿಳಿಸಿದ್ದಾರೆ.

ಶುಕ್ರವಾರ ನಗರದ ಫ್ರೀಡಂ ಪಾರ್ಕ್‍ನಲ್ಲಿ ಶಾಸಕ ಮುನಿರತ್ನ ವಿರುದ್ಧ ಯುವ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಎಲ್ಲಾದರೂ ಮಹಿಳೆಯರ ಮೇಲೆ ದೌರ್ಜನ್ಯ ನಡೆದರೆ ಅದನ್ನು ಖಂಡಿಸುತ್ತೇವೆ. ವಿಕೃತ ಕಾಮಿಯಾದ ಪ್ರಜ್ವಲ್ ರೇವಣ್ಣ ಹಾಗೆ ಮುನಿರತ್ನ ಆಗಿದ್ದಾರೆ. ಇವರ ಆಲೋಚನೆ ಮನಸ್ಥಿತಿಯನ್ನು ನೋಡಿದರೆ ಇವರನ್ನು ಬದಲಾವಣೆ ಮಾಡಬೇಕು ಎಂದರು.

ಸಾಮಾಜಿಕ ಜಾಲತಾಣದಲ್ಲಿ ಮುನಿರತ್ನ ಮಾತನಾಡಿರುವುದನ್ನು ನೋಡಿದರೆ ಒಬ್ಬ ವ್ಯಕ್ತಿ ಇಷ್ಟು ನೀಚವಾಗಿ ಮಾತನಾಡಿರುವುದು ಯಾವತ್ತೂ ಕೇಳಿರಲಿಲ್ಲ. ಜನ ಬೆಂಬಲವಿದೆ ಎಂದು ಜನರ ಮೇಲೆ ದೌರ್ಜನ್ಯ ಮಾಡಲಾಗುತ್ತಿದೆ. ಜಾತಿಗಳ ಬಗ್ಗೆ ಆಲೋಚನೆ ಮಾಡುವ ರೀತಿಯನ್ನು ನೋಡಿದರೆ ರೌಡಿಗಳಂತೆ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷ ಮಂಜುನಾಥಗೌಡ, ಉಪಾಧ್ಯಕ್ಷ ಆನಂದ್, ಕಾರ್ಯದರ್ಶಿ ಆಶಿಕ್‍ಗೌಡ, ಅಬ್ಬಾಸ್, ರಾಹುಲ್, ರಾಜೀವಪ್ಪ ಮತ್ತಿತರರು ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News