ವಿಜ್ಞಾನ ವಿಭಾಗದಲ್ಲಿ ಅಮೋದ್ ನಾಯಕ್ ರಾಜ್ಯಕ್ಕೆ ನಾಲ್ಕನೆ ರ‍್ಯಾಂಕ್

Update: 2024-04-13 16:48 GMT

ಬೆಂಗಳೂರು: ಬೆಂಗಳೂರಿನ ಜಾಲಹಳ್ಳಿ ಬಳಿಯ ಕಮ್ಮಗೊಂಡನಹಳ್ಳಿ ಡಿ.ಆರ್.ಅಕಾಡಮಿಯ ಅಶೋಕ್ ಪಿಯು ಕಾಲೇಜು 2023-24ನೆ ಸಾಲಿನ ದ್ವಿತಿಯ ಪಿಯುಸಿ ಪರೀಕ್ಷೆಯಲ್ಲಿ ಶೇ.100ರಷ್ಟು ಫಲಿತಾಂಶ ಪಡೆದಿದ್ದು, ವಿಜ್ಞಾನ ವಿಭಾಗದಲ್ಲಿ ಅಮೋದ್ ನಾಯಕ್ 600ಕ್ಕೆ 595 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ ನಾಲ್ಕನೆ ರ‍್ಯಾಂಕ್ ಗಳಿಸಿದ್ದಾನೆ.

ಅದೇ ರೀತಿಯಲ್ಲಿ ಕವನಾ 600ಕ್ಕೆ 594 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ ಐದನೆ ರ‍್ಯಾಂಕ್, ನಂದಿತಾ ಹಾಗೂ ಪೂರ್ವಿಕ ಕ್ರಮವಾಗಿ 591 ಹಾಗೂ 590 ಅಂಕಗಳನ್ನು ಗಳಿಸುವ ಮೂಲಕ ಸಾಧನೆ ಗೈದಿದ್ದಾರೆ. ಕಾಲೇಜಿನ ಒಟ್ಟು 452 ವಿದ್ಯಾರ್ಥಿಗಳ ಪೈಕಿ 347 ಮಂದಿ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 104 ಮಂದಿ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದು, ಸಾಧನೆ ವಿದ್ಯಾರ್ಥಿಗಳನ್ನು ಅಕಾಡಮಿ ವ್ಯವಸ್ಥಾಪಕ ನಿರ್ದೇಶಕ ಪಿ.ದೇವೇಂದರ್ ರೆಡ್ಡಿ ಅಭಿನಂದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News