ಕನ್ನಡ ಪ್ರಭ ವರದಿಗಾರ ಆನಂದ ಸವದಿಗೆ ʼರಾಮನಾಥ ಗೊಯಂಕಾʼ ಪ್ರಶಸ್ತಿ
Update: 2024-03-19 19:02 GMT
ಬೆಂಗಳೂರು: ಇಂಡಿಯನ್ ಎಕ್ಸ್ ಪ್ರೆಸ್ ಗ್ರೋಪ್ ನ ʼರಾಮನಾಥ ಗೊಯೆಂಕಾʼ ಪ್ರತಿಷ್ಠಾನ 2021 - 22ರ ವಾರ್ಷಿಕ ಪ್ರಶಸ್ತಿ ಘೋಷಿಸಿದ್ದು, ಪಿಎಸ್ ಐ ಅಕ್ರಮ ಭೇದಿಸಿದ್ದ ಕನ್ನಡ ಪ್ರಭ ದಿನಪತ್ರಿಕೆಯ ಯಾದಗಿರಿ ವರದಿಗಾರ ಅನಂದ ಸವದಿಗೆ ಪ್ರಾದೇಶಿಕ ಬಾಷಾ ವಿಭಾಗದಲ್ಲಿ ಪ್ರತಿಷ್ಠಿತ ʼರಾಮನಾಥ ಗೊಯೆಂಕಾʼ ಪ್ರಶಸ್ತಿ ಲಭಿಸಿದೆ.
ದಿಲ್ಲಿಯಲ್ಲಿ ಅವರಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಪ್ರತಿಷ್ಠಿತ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದಾರೆ.