ಕಾರು ತಡೆದು ತಂಡದಿಂದ ಹಲ್ಲೆ: ದೂರು ದಾಖಲು

Update: 2023-09-11 17:57 GMT

ಕಾಪು : ಕ್ಷುಲ್ಲಕ ಕಾರಣಕ್ಕೆಕಾರಿನಲ್ಲಿ ಬಂದ ತಂಡವೊಂದು ಇನ್ನೊಂದು ಕಾರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿ ಕಾರಿಗೆ ಹಾನಿಗೊಳಿಸಿದ ಘಟನೆ ಕಾಪುವಿನ ಕೊಪ್ಪಲಂಗಡಿಯಲ್ಲಿ ಶನಿವಾರ ರಾತ್ರಿ ನಡೆದಿದೆ.

ಈ ಬಗ್ಗೆ ಕಾಪು ಠಾಣೆಗೆ ದೂರು ನೀಡಿರುವ ಫಲಿಮಾರು ನಿವಾಸಿ ಗಣೇಶ್ ಪ್ರಸಾದ್, ನಾನು ಮತ್ತು ಸ್ನೇಹಿತರಾದ ನಿತಿನ್, ಜಿತೇಶ್‍ರೊಂದಿಗೆ ಉಡುಪಿಗೆ ತೆರಳಿ ವಾಪಾಸಾಗುತಿದ್ದಾಗ ಕಾಪುವಿನ ಪ್ಲೈಓವರ್ ಮೇಲೆ ಕಾರನ್ನು ಅದರ ಚಾಲಕನು ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಹೋಗುತ್ತಿದ್ದನು. ಆ ಕಾರನ್ನು ಓವರ್ ಟೇಕ್ ಮಾಡಿ ಮುಂದೆ ಹೋಗುತಿದ್ದಾಗ ಕೊಪ್ಪಲಂಗಡಿ ಸಮೀಪ ತಲುಪುವಾಗ ಕಾರನ್ನು ಓವರ್ ಟೇಕ್ ಮಾಡಿ ಕಾರು ಮುಂದೆ ಹೋಗದಂತೆ ಎದುರುಗಡೆ ತಂದು ನಿಲ್ಲಿಸಿ ಆ ಕಾರಿನಲ್ಲಿದ್ದ 25-30 ಪ್ರಾಯದ 4 ಜನರು ಇಳಿದು ಅಪರಿಚಿತರು ಅವಾಚ್ಯ ಶಬ್ದಗಳಿಂದ ಬೈಯ್ದು ಹಲ್ಲೆ ನಡೆಸಿದ್ದಾರೆ. ಇದರಿಂದ ನಾವು ಹೆದರಿ ಕಾರಿನ ಒಳಗೆ ಲಾಕ್ ಮಾಡಿಕೊಂಡಾಗ ಆ 4 ಜನರು ಕೈಯಿಂದ ಮತ್ತು ಅವರ ಕೈಯಲ್ಲಿದ್ದ ಆಯುಧಗಳಿಂದ ಕಾರಿಗೆ ಹೊಡೆದು ಎದುರುಗಡೆ ಗ್ಲಾಸ್, ಕಿಟಕಿ ಗ್ಲಾಸ್, ಬಾಡಿ ಇತ್ಯಾದಿ ಜಖಂಗೊಳಿಸಿ ಜೀವ ಬೆದರಿಕೆ ಹಾಕಿದ್ದಾರೆ. ಇದರಿಂದ ಒಂದು ಲಕ್ಷ ರೂಪಾಯಿ ನಷ್ಟ ಉಂಟಾಗಿರುವುದಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಕಾಪು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News