ಸಂಪಾಜೆ ಬಂಟೋಡಿಯಲ್ಲಿ ಮುಂದುವರಿದ ಕಾಡಾನೆ ಹಾವಳಿ

Update: 2024-01-15 10:55 GMT

ಸುಳ್ಯ: ಸಂಪಾಜೆ ಗ್ರಾಮದ ಬಂಟೋಡಿ ಕಿಲಾರ್, ನೆಲ್ಲಿಕುಮೆರಿ ಬೈಲೆ ಪರಿಸರದಲ್ಲಿ ಕಾಡಾನೆ ದಾಳಿ ಮುಂದುವರಿದಿದೆ.

ಕಾಡಾನೆಗಳ ಹಿಂಡು ಪದೇ ಪದೇ ನಾಡಿಗೆ ಬಂದು ಕೃಷಿ ಹಾನಿ ಮಾಡುತಿದೆ. ಶನಿವಾರ ರಾತ್ರಿ ಬಂಟೋಡಿ ಭಾಗದಲ್ಲಿ ವ್ಯಾಪಕವಾಗಿ ಹಾನಿ ಮಾಡಿದೆ. ಕಳೆದ ಅನೇಕ ದಿನಗಳಿಂದ ಈ ಭಾಗದಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳ ಹಿಂಡು ನಾಡಿಗೆ ನುಗ್ಗಿ ತೆಂಗು, ಕಂಗು, ಬಾಳೆ ಮತ್ತಿತರ ಕೃಷಿಯನ್ನು ನಾಶಪಡಿಸುತಿದೆ. ವಸತಿ ಪ್ರದೇಶದ ಸಮೀಪದಲ್ಲಿಯೇ ಬೀಡು ಬಿಟ್ಟು ಮನೆ ಸಮೀಪದವರೆಗೆ ಬಂದು ಕೃಷಿ ಹಾನಿ ಮಾಡುವ ಆನೆಗಳ ಹಿಂಡು ಭೀತಿ ಹುಟ್ಟಿಸಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News