ಉಳ್ಳಾಲ: ಸೆಂಟ್ರಿಂಗ್‌ ಶೀಟ್‌ ಕಳವು; ಪ್ರಕರಣ ದಾಖಲು

Update: 2023-08-10 09:07 GMT

ಸಾಂದರ್ಭಿಕ ಚಿತ್ರ

ಉಳ್ಳಾಲ: ಇಲ್ಲಿನ ಠಾಣಾ ವ್ಯಾಪ್ತಿಯ ಕೊಲ್ಯ ಶ್ರೀ ಶಾರದೋತ್ಸವ ಉತ್ಸವ ಸಮಿತಿಯ ನೂತನ ಮಂದಿರದ ವಠಾರದಿಂದ ಲಕ್ಷಾಂತರ ಮೌಲ್ಯದ ಸೆಂಟ್ರಿಂಗ್‌ ಶೀಟ್‌ ಗಳನ್ನು ಕಳವು ನಡೆಸಿರುವ ಘಟನೆ ಇಂದು ನಸುಕಿನ ಜಾವ ಸಂಭವಿಸಿರುವ ಬಗ್ಗೆ ವರದಿಯಾಗಿದೆ.

ಗುತ್ತಿಗೆದಾರ ತೊಕ್ಕೊಟ್ಟು ನಿವಾಸಿ ಸುಂದರ ಗಟ್ಟಿ ಎಂಬವರು ಬಾಡಿಗೆಗೆ ತಂದಿದ್ದ 2.5 ಲಕ್ಷ ರೂ.ಗಳ 119 ತಗಡುಶೀಟುಗಳು ಕಳವಾಗಿದೆ ಎಂದು ತಿಳಿದು ಬಂದಿದೆ.

ಸ್ಥಳೀಯ ಸಿಸಿಟಿವಿ ದೃಶ್ಯದ ಆಧಾರದಲ್ಲಿ ಪಿಕಪ್‌ ವಾಹನವನ್ನು ಬಳಸಿಕೊಂಡು ಕೃತ್ಯ ಎಸಗಿರುವುದಾಗಿಯೂ ಪೊಲೀಸರಿಗೆ ಮಾಹಿತಿ ಲಭಿಸಿದೆ.

ಕೊಲ್ಯ ಶಾರದ ಉತ್ಸವ ಸಮಿತಿಯ ನೂತನ ಮಂದಿರ ನಿರ್ಮಾಣ ಕಾಮಗಾರಿಗಾಗಿ ಜರಗುತ್ತಿದ್ದು, ಆಗಸ್ಟ್ 8 ರಂದು ಸಂಜೆ ಗುತ್ತಿಗೆದಾರ ಸುಂದರ ಗಟ್ಟಿ ಶೀಟುಗಳನ್ನು ಬಾಡಿಗೆಗೆ ಪಡೆದುಕೊಂಡು ತಂದಿರಿಸಿದ್ದರು. ಈ ಕುರಿತು ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News