ಕಲಬುರಗಿ | ಅಷ್ಟ ತೀರ್ಥದಲ್ಲಿ ಸ್ನಾನ ಮಾಡಲು ಹೋದ ಇಬ್ಬರು ಬಾಲಕರು ನೀರುಪಾಲು

Update: 2024-08-13 12:43 GMT

ಕಲಬುರಗಿ: ಅಷ್ಟ ತೀರ್ಥದಲ್ಲಿ ಸ್ನಾನ ಮಾಡಲು ಹೋಗಿದ್ದ ನಾಲ್ವರು ಬಾಲಕರ ಪೈಕಿ ಇಬ್ಬರು ನದಿ ಪಾಲಾಗಿರುವ ಘಟನೆ ಅಫಜಲಪುರ ತಾಲ್ಲೂಕಿನ ಗಾಣಗಾಪುರದಲ್ಲಿ ಮಂಗಳವಾರ ನಡೆದಿದೆ.

ಗಾಣಗಾಪುರದ ನಿವಾಸಿ ಪ್ರಕಾಶ ಸುಭಾಷ್ ವಾಗಮೊರೆ(18) ಮತ್ತು ಗುಜರಾತ್ ಮೂಲದ ಸಕ್ಷಮ್ ವಿನೋದ ಕೊಳಿ (15) ಮೃತಪಟ್ಟ ಬಾಲಕರು ಎಂದು ಗುರುತಿಸಲಾಗಿದೆ.

ಮೃತ ಇಬ್ಬರು ಬಾಲಕರು ಸೇರಿ ನಾಲ್ವರು ಪಾಪನಾಶಿ ಅಷ್ಟ ತೀರ್ಥ ಸ್ನಾನ ಕೈಗೊಂಡಿದ್ದರು ಎನ್ನಲಾಗುತ್ತಿದ್ದು, ಮಂಗಳವಾರ ಪಾಪನಾಶಿ ಅಷ್ಟ ತೀರ್ಥ ಸ್ನಾನ ಮಾಡುವಾಗ ಸಕ್ಷಮ್ ಎನ್ನುವ ಬಾಲಕ ಕಾಲು ಜಾರಿ ನದಿಗೆ ಬಿದ್ದಿದ್ದಾನೆ ಎನ್ನಲಾಗಿದೆ. ಅವನ್ನು ರಕ್ಷಿಸಲು ಪ್ರಕಾಶ್ ಮುಂದಾಗಿರುವ ವೇಳೆ ಇಬ್ಬರು ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ಗಾಣಗಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News