ಕರ್ನಾಟಕದಿಂದ ಕಾಸರಗೋಡಿಗೆ ಅಕ್ರಮವಾಗಿ ತಂಬಾಕು ಉತ್ಪನ್ನ ಸಾಗಾಟ: ಇಬ್ಬರ ಬಂಧನ

Update: 2023-09-15 05:18 GMT

ಕಾಸರಗೋಡು, ಸೆ.15: ಕರ್ನಾಟಕ ದಿಂದ ಕಾಸರಗೋಡಿಗೆ ಅಕ್ರಮವಾಗಿ ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ ಸುಮಾರು 240 ಕೆಜಿ ತಂಬಾಕು ಉತ್ಪನ್ನಗಳನ್ನು ಮಂಜೇಶ್ವರ ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಿದ್ದಾರೆ.

ಉಳಿಯತ್ತಡ್ಕ ನಿವಾಸಿ ಕೆ.ಅನ್ವರ್ ಅಲಿ ಮತ್ತು ಚೆರ್ಕಳ ನಿವಾಸಿ ಬಿ. ಮೊಯ್ದು ಬಂಧಿತ ಆರೋಪಿಗಳು. ಹೊಸಂಗಡಿ ಅಬಕಾರಿ ಚೆಕ್ ಪೋಸ್ಟ್ ಬಳಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಅಕ್ರಮ ಸಾಗಾಟ ಪತ್ತೆಯಾಗಿದೆ. ವಶಪಡಿಸಿ ಕೊಂಡ ತಂಬಾಕು ಉತ್ಪನ್ನಗಳ ಮೌಲ್ಯ ಎರಡು ಲಕ್ಷ ರೂ. ಮೌಲ್ಯ ಎಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News