ಕಾಸರಗೋಡು: ಗ್ಯಾರೇಜ್ ಮಾಲಕನ ಮೃತದೇಹ ಚರಂಡಿಯಲ್ಲಿ ಪತ್ತೆ

Update: 2024-05-24 05:50 GMT

ಕಾಸರಗೋಡು, ಮೇ 24: ಗ್ಯಾರೇಜ್ ಮಾಲಕನೋರ್ವ ನ ಮೃತದೇಹ ರಸ್ತೆ ಬದಿಯ ಚರಂಡಿಯಲ್ಲಿ ಪತ್ತೆಯಾದ ಘಟನೆ ಶುಕ್ರವಾರ ಬೆಳಗ್ಗೆ ಬಂದಡ್ಕದಿಂದ ವರದಿಯಾಗಿದೆ.

ಬಂದಡ್ಕ ಪೆಟ್ರೋಲ್ ಸಮೀಪದ ನಿವಾಸಿ ರತೀಶ್(42) ಮೃತಪಟ್ಟವರು. ಆ್ಯಂಬುಲೆನ್ಸ್ ಚಾಲಕರಾಗಿಯೂ ದುಡಿಯುತ್ತಿದ್ದ ರತೀಶ್ ಗುರುವಾರ ರಾತ್ರಿ 9:30 ರ ಸುಮಾರಿಗೆ ಸ್ಕೂಟರ್ ನಲ್ಲಿ ಮನೆಯಿಂದ ತೆರಳಿದವರು ವಾಪಸ್ ಮನೆಗೆ ಬಂದಿರಲಿಲ್ಲ. ಶುಕ್ರವಾರ ಬೆಳಗ್ಗೆ ಗ್ಯಾರೇಜ್ ಸಮೀಪದ ರಸ್ತೆಯ ಚರಂಡಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ಸ್ಕೂಟರ್ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆ ಗಾಗಿ ಕಾಸರಗೋಡು ಜನರಲ್ ಆಸ್ಪತ್ರೆ ಕೊಂಡೊಯ್ಯಲಾಗಿದೆ.

ಬೇಡಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News