ಮಂಜೇಶ್ವರ: ಕೊಡ್ಲಮೊಗರು, ಪಾತೂರು ಸೇವಾ ಸಹಕಾರಿ ಬ್ಯಾಂಕ್ ನಲ್ಲಿ ಕಳ್ಳತನಕ್ಕೆ ಯತ್ನ; ಪ್ರಕರಣ ದಾಖಲು

Update: 2024-08-25 07:17 GMT

ಮಂಜೇಶ್ವರ: ಕೊಡ್ಲಮೊಗರು, ಪಾತೂರು  ಸೇವಾ ಸಹಕಾರಿ ಬ್ಯಾಂಕ್ ನ ಪ್ರಧಾನ ಕಚೇರಿಗೆ ಕಳ್ಳರು ನುಗ್ಗಿರುವ  ಘಟನೆ  ದೈಗೋಳಿಯಲ್ಲಿ  ನಡೆದಿರುವುದು ರವಿವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.

ಸಿ.ಸಿ ಟಿ ವಿ ಹಾಗೂ ಸೈರನ್ ನ ಕೇಬಲ್ ತುಂಡರಿಸಿದ ಸ್ಥಿತಿಯಲ್ಲಿದೆ. ಕಡತಗಳನ್ನು ಚೆಲ್ಲಾಪಿಲ್ಲಿಗೊಳಿಸಲಾಗಿದೆ. ಆದರೆ ಬ್ಯಾಂಕ್ ನ ಲಾಕರನ್ನು ಮುರಿಯಲು ಕಳ್ಳರಿಗೆ ಸಾಧ್ಯವಾಗಿಲ್ಲ  ಎಂದು ತಿಳಿದು ಬಂದಿದೆ.

ಮಂಜೇಶ್ವರ ಠಾಣಾ ಪೊಲೀಸರಿಗೆ ಬ್ಯಾಂಕ್ ಆಡಳಿತ ಮಂಡಳಿ ಅಧಿಕಾರಿಗಳು ದೂರು ನೀಡಿದ್ದು, ಸ್ಟಳಕ್ಕಾಗಮಿಸಿದ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News