ಕಾಸರಗೋಡು : ಮನೆಗೆ ನುಗ್ಗಿ ಚಿನ್ನಾಭರಣ ಕಳವು

Update: 2024-01-16 14:16 GMT

ಸಾಂದರ್ಭಿಕ ಚಿತ್ರ

ಕಾಸರಗೋಡು : ಶಿಕ್ಷಕರೋರ್ವರ ಮನೆಗೆ ನುಗ್ಗಿದ ಕಳ್ಳರು ಸುಮಾರು 25 ಪವನ್ ಚಿನ್ನಾಭರಣ ಕಳವುಗೈದ ಘಟನೆ ಇಂದು ಮಧ್ಯಾಹ್ನ ಪುತ್ತಿಗೆ ಮುಗು ಎಂಬಲ್ಲಿ ನಡೆದಿದೆ.

ಶಿಕ್ಷಕ ಪ್ರಸಾದ್ ರೈ ರವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಮಧ್ಯಾಹ್ನ 1 ಗಂಟೆ ಯಿಂದ 3 ಗಂಟೆ ನಡುವೆ ಈ ಕೃತ್ಯ ನಡೆದಿದೆ. ಪ್ರಸಾದ್ ರೈ ಶಾಲೆಗೆ ತೆರಳಿದ್ದರು. ಪತ್ನಿ ಮಧ್ಯಾಹ್ನ ಸಮೀಪದ ದೇವ ಸ್ಥಾನಕ್ಕೆ ತೆರಳಿದ್ದು ಈ ಸಂದರ್ಭ ಕಳವು ನಡೆದಿದೆ.

ದೇವಸ್ಥಾನ ದಿಂದ ಮರಳಿ ಬಂದಾಗ ಮನೆಯ ಬಾಗಿಲು ಮುರಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಪಾಟಿ ನಲ್ಲಿ ರಿಸಿದ್ದ ವಸ್ತ್ರ ಗಳನ್ನು ಚೆಲ್ಲಾಪಿಲ್ಲಿ ಯಾಗಿ ಎಸೆಯಲಾಗಿದೆ. ಕಪಾಟಿ ನಲ್ಲಿರಿಸಲಾಗಿದ್ದ ಚಿನ್ನಾಭರಣವನ್ನು ಕಳವುಗೈಯ್ಯಲಾಗಿದೆ. ಬದಿಯಡ್ಕ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News