ವರ್ಕಾಡಿ ಎಗ್ರಿಕಲ್ಚರಿಸ್ಟ್ ವೆಲ್ಫೇರ್ ಕೋ ಆಪರೇಟಿವ್ ಸೊಸೈಟಿಯ ವಾರ್ಷಿಕ ಮಹಾಸಭೆ

Update: 2024-09-29 17:02 GMT

ವರ್ಕಾಡಿ: ಎಗ್ರಿಕಲ್ಚರಿಸ್ಟ್ ವೆಲ್ಫೇರ್ ಕೋ ಆಪರೇಟಿವ್ ಸೊಸೈಟಿಯ ವಾರ್ಷಿಕ ಮಹಾಸಭೆಯು ಸೊಸೈಟಿಯ ಅಧ್ಯಕ್ಷರಾದ ವಿಶ್ವನಾಥ ಕುದುರು ಇವರ ಅಧ್ಯಕ್ಷತೆಯಲ್ಲಿ ಜರಗಿತು.

ಸೊಸೈಟಿಯ ಕಾರ್ಯದರ್ಶಿ ರವೀಂದ್ರ ಮಡ್ವ ಸ್ವಾಗತಿಸಿ, ವರದಿ ಹಾಗೂ ಆಡಿಟ್ ರಿಪೋರ್ಟ್ ಮಂಡಿಸಿದರು.

ಸಭೆಯ ಅಧ್ಯಕ್ಷರಾದ ವಿಶ್ವನಾಥ ಕುದುರು ಮಾತನಾಡಿ ಸೊಸೈಟಿಯು ಪ್ರಸ್ತುತ ವರ್ಷದಲ್ಲಿ 118 ಕೋಟಿ ವಾರ್ಷಿಕ ವ್ಯವಹಾರ ಮಾಡಿ ,682,532 ನೀವ್ವಳ ಲಾಭಗಳಿಸಿದೆ ಎಂದು ತಿಳಿಸಿದರು ಹಾಗೂ ಸದಸ್ಯರಿಗೆ 10 ಶೇಕಡ ಡಿವಿಡೆಂಟ್ ಘೋಷಣೆ ಮಾಡಿದರು.

ಡಿ ಬೂಬ ಮತ್ತು ಗಣೇಶ್ ಪಾವೂರು ಇವರು ಸಭೆಯನ್ನುದ್ದೇಶಿಸಿ ಶುಭನುಡಿಗಳನ್ನುಡಿದರು. ಆಡಳಿತ ಮಂಡಳಿಯ ಪರವಾಗಿ ಭಾರತಿ ಸುಳ್ಯಮೆ, ಮಾಧವ ಕುದುಕೋರಿ ,ಲತೀಫ್ ಕಲ್ಮಿಂಜ ಮಾತನಾಡಿದರು. ನಂತರ 2023-24 ನೇ ವರ್ಷದಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪ್ಲಸ್ ಟು ವಿಭಾಗದಲ್ಲಿ 60% ಮೇಲ್ಪಟ್ಟು ಅಂಕ ಪಡೆದ 37 ಸೊಸೈಟಿಯ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ಪುರಸ್ಕಾರ ಹಾಗೂ ನಗದು ಬಹುಮಾನ ವಿತರಿಸಲಾಯಿತು. ಸೊಸೈಟಿಯ ಉಪಾಧ್ಯಕ್ಷರಾದ ಸುಂದರ ಜೋಗಿಬೆಟ್ಟು ಧನ್ಯವಾದವಿತ್ತರು.




Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News