ಮಂಡ್ಯ | ಸ್ಕೂಟರ್ ಗೆ ಅಡ್ಡ ಬಂದ ಸೈಕಲ್: ಶಾಲಾ ಬಾಲಕಿಗೆ ವ್ಯಕ್ತಿಯಿಂದ ಹಲ್ಲೆ; ದೂರು ದಾಖಲು

Update: 2024-03-07 04:33 GMT

ಮಂಡ್ಯ, ಮಾ.7: ತನ್ನ ದ್ವಿಚಕ್ರ ವಾಹನಕ್ಕೆ ಅಡ್ಡ ಬಂದಳು ಎಂಬ ಕಾರಣಕ್ಕೆ ಶಾಲಾ ವಿದ್ಯಾರ್ಥಿನಿಗೆ ವ್ಯಕ್ತಿಯೋರ್ವ ಹಲ್ಲೆ ನಡೆಸಿರುವ ಬಗ್ಗೆ ನಗರದ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

13 ವರ್ಷದ ವಿದ್ಯಾರ್ಥಿನಿಯ ತಾಯಿ ನೀಡಿದ ದೂರಿನ ಆಧಾರದ ಮೇಲೆ IPC 1860 (U/s-341,323,354); Juvenile Justice (Care and Protection of Children) Act, 2015 (U/s-7ಯಡಿ ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ರಮೇಶ್ ವಿರುದ್ಧ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ದೂರಿನ ಸಾರಾಂಶ: ಬುಧವಾರ ಮಧ್ಯಾಹ್ನ ನನ್ನ ಮಗಳು ನಗರದ ಸುಭಾಷ್ ನಗರದ 3ನೇ ಕ್ರಾಸ್ ನಲ್ಲಿ ಸೈಕಲ್ ನಲ್ಲಿ ಶಾಲೆಗೆ ತೆರಳುತ್ತಿದ್ದ ವೇಳೆ ಸ್ಕೂಟರ್ ನಲ್ಲಿ ಬರುತ್ತಿದ್ದ ರಮೇಶ ತನ್ನ ಬೈಕಿಗೆ ಅಡ್ಡ ಬಂದಳು ಎಂಬ ಕಾರಣಕ್ಕೆ ನನ್ನ ಮಗಳಿಗೆ ಕಪಾಳ ಮೋಕ್ಷ ಮಾಡಿ, ಹಲ್ಲೆ ಮಾಡಿದ್ದಾರೆ ಎಂದು ದೂರಿದ್ದಾರೆ.

ನನ್ನ ಮಗಳು ನನಗೆ ಪರೀಕ್ಷೆ ಇದೆ, ನನ್ನದೇನು ತಪ್ಪಿಲ್ಲ ಬಿಡಿ ಎಂದು ಎಷ್ಟೇ ಬೇಡಿಕೊಂಡರು ಬಿಡದೇ ಹಲ್ಲೆ ಮಾಡಿರುತ್ತಾರೆ. ನನ್ನ ಮಗಳ ಬಟ್ಟೆಯನ್ನು ಹಿಡಿದು ಎಳೆದಾಡಿ, ಹೊಡೆದಿದ್ದಾರೆ. ಈ ವಿಚಾರವನ್ನು ನನ್ನ ಮಗಳಿಂದ ತಿಳಿದುಕೊಂಡು ದೂರು ನೀಡಿದ್ದೇನೆಂದು ಸಂತ್ರಸ್ಥೆ ವಿದ್ಯಾರ್ಥಿನಿಯ ತಾಯಿ ದೂರಿನಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News