ಮಹಾರಾಷ್ಟ್ರ ಶಾಲಾ ಪಠ್ಯಪುಸ್ತಕದಲ್ಲಿ ಸ್ಥಾನ ಪಡೆದ "ರಾಷ್ಟ್ರೀಯ ಶೌರ್ಯ ಪ್ರಶಸ್ತಿ" ಪುರಸ್ಕೃತ ಎಜಾಝ್ ನದಾಫ್

Update: 2023-07-17 12:19 GMT

ಎಜಾಜ್ ನದಾಫ್

ಪರಡಿ: ಅರ್ಧಾಪುರದ ಬಾಲಭಾರತಿಯಲ್ಲಿ 6ನೇ ತರಗತಿಯ ಉರ್ದು ಪಠ್ಯಪುಸ್ತಕದಲ್ಲಿ ಪ್ರತಿಷ್ಠಿತ “ರಾಷ್ಟ್ರೀಯ ಶೌರ್ಯ ಪ್ರಶಸ್ತಿ” ಪುರಸ್ಕೃತ ಎಜಾಝ್ ನದಾಫ್ ಅವರ ಕಥೆಯನ್ನು ಅಳವಡಿಸಲಾಗಿದೆ. 16ರ ಹರೆಯದಲ್ಲಿ ಎಜಾಜ್ ನದಾಫ್ ಅವರು ಮಾಡಿರುವ ಸಾಹಸ ಕಾರ್ಯ ಇದೀಗ ಈ ಪಠ್ಯಪುಸ್ತಕದಲ್ಲಿ ಸ್ಥಾನ ಪಡೆದಿದೆ.

ಎಪ್ರಿಲ್ 30, 2017 ರಲ್ಲಿ, ನದಿಯಲ್ಲಿ ಮುಳುಗುತ್ತಿದ್ದ ಇಬ್ಬರು ಹುಡುಗಿಯರನ್ನು ಎಜಾಝ್ ರಕ್ಷಿಸಿದ್ದರು. ಇದಕ್ಕಾಗಿ ಅವರಿಗೆ ಜನವರಿ 26, 2018 ರಲ್ಲಿ "ರಾಷ್ಟ್ರೀಯ ಮಕ್ಕಳ ಶೌರ್ಯ" ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿತ್ತು. 2018 ರಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದ ಮಹಾರಾಷ್ಟ್ರದ ಏಕೈಕ ವಿದ್ಯಾರ್ಥಿ ಎಜಾಜ್ ನದಾಫ್ ಆಗಿದ್ದರು.

ತನ್ನ ಹಳ್ಳಿಯಲ್ಲಿ 1 ರಿಂದ 12 ನೇ ತರಗತಿಯವರೆಗೆ ಶಿಕ್ಷಣವನ್ನು ಪೂರ್ಣಗೊಳಿಸಿದ ಎಜಾಝ್, ರಾಜಾಬಾಯಿ ಪ್ರೌಢಶಾಲೆಯಲ್ಲಿ ತನ್ನ 10 ನೇ ತರಗತಿಯಲ್ಲಿರುವಾಗ ತಮ್ಮ ಶೌರ್ಯವನ್ನು ಪ್ರದರ್ಶಿಸಿದ್ದರು.

ಎಜಾಝ್ ನದಾಫ್ ರ ಶೈಕ್ಷಣಿಕ ಮತ್ತು ಭವಿಷ್ಯದ ಸುಧಾರಣೆಗಾಗಿ, ಅವರನ್ನು ಕರ್ನಾಟಕದ ಬೀದರ್‌ನಲ್ಲಿರುವ ಶಾಹೀನ್ ಸಂಸ್ಥೆ ದತ್ತು ತೆಗೆದುಕೊಂಡಿತ್ತು.

ಎಜಾಝ್ 70% ಅಂಕಗಳನ್ನು ಗಳಿಸಿದ್ದರೂ, ಆತನ ಕುಟುಂಬದ ಆರ್ಥಿಕ ಪರಿಸ್ಥಿತಿಯಿಂದಾಗಿ ಆತ 10 ನೇ ತರಗತಿಯ ನಂತರ ತನ್ನ ಹಳ್ಳಿಯಲ್ಲಿ ಕೂಲಿಯಾಗಿ ಕೆಲಸ ಮಾಡಲು ಆರಂಭಿಸಿದ್ದರು. ಕೌಟುಂಬಿಕ ಸವಾಲುಗಳ ನಡುವೆಯೂ 12ನೇ ತರಗತಿಯಲ್ಲಿ ಉತ್ತೀರ್ಣನಾದ ಎಜಾಝ್ ರನ್ನು ಶಾಹೀನ್ ಸಂಸ್ಥೆಯು ದತ್ತು ಪಡೆದಿದ್ದು, ಪ್ರಸ್ತುತ, ಎಜಾಝ್ ಶಾಹೀನ್ ಸಂಸ್ಥೆಯಲ್ಲಿ UPSC ಪರೀಕ್ಷೆಗಳಿಗೆ ತಯಾರಿ ನಡೆಸುತ್ತಲೇ ಬಿಎ ಪದವಿಯನ್ನು ಪಡೆಯುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News