ಮಣಿಪುರ ಸಿಎಂ ಬೆಂಗಾವಲು ಪಡೆಯ ವಾಹನದ ಮೇಲೆ ಶಂಕಿತ ಉಗ್ರರಿಂದ ದಾಳಿ; ಓರ್ವ ಪೊಲೀಸ್‌ ಸಿಬ್ಬಂದಿಗೆ ಗಾಯ

Update: 2024-06-10 08:11 GMT

ಮಣಿಪುರ ಮುಖ್ಯಮಂತ್ರಿ ಬಿರೇನ್‌ ಸಿಂಗ್‌ (PTI)

ಇಂಫಾಲ್: ಶಂಕಿತ ಕುಕಿ ತೀವ್ರಗಾಮಿಗಳ ಒಂದು ಗುಂಪು ಮಣಿಪುರ ಮುಖ್ಯಮಂತ್ರಿಯ ಭದ್ರತಾ ತಂಡದ ಭಾಗವಾಗಿದ್ದ ಪೊಲೀಸ್‌ ಬೆಂಗಾವಲು ಪಡೆಯೊಂದನ್ನು ಇಂದು ಮುಂಜಾನೆ ರಾಷ್ಟ್ರೀಯ ಹೆದ್ದಾರಿ 37ರ ಇಂಫಾಲ್-ಜಿರಿಬಮ್‌ ರಸ್ತೆಯಲ್ಲಿ ಸುತ್ತುವರಿದು ನಡೆಸಿದ ದಾಳಿಯಲ್ಲಿ ಓರ್ವ ಪೊಲೀಸ್‌ ಸಿಬ್ಬಂದಿ ಗಾಯಗೊಂಡಿದ್ದಾರೆ.

ಇಂಫಾಲದಿಂದ 26 ಕಿಮೀ ದೂರದಲ್ಲಿರುವ ಟಿ ಲೈಜಂಗ್‌ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗಾಯಾಳುವನ್ನು ಬಿಷ್ಣುಪುರ್‌ ಜಿಲ್ಲೆಯ ತಂಗ ನಗರಮ್‌ ಲೀಕೈ ನಿವಾಸಿಯಾಗಿರುವ 32 ವರ್ಷದ ಮೊಯಿರಂಗ್ತೆಮ್‌ ಅಜೇಶ್‌ ಎಂದು ಗುರುತಿಸಲಾಗಿದೆ. ಎಡ ಭುಜದ ಹಿಂಭಾಗದಲ್ಲಿ ಅವರಿಗೆ ಗುಂಡೇಟು ತಗಲಿದ್ದು ಇಂಫಾಲದ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದೆ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News