ರಾಯಚೂರು: ಶಾಂತರಸರ ಶತಮಾನೋತ್ಸವ ಕಾರ್ಯಕ್ರಮ

Update: 2025-04-08 21:23 IST
ರಾಯಚೂರು: ಶಾಂತರಸರ ಶತಮಾನೋತ್ಸವ ಕಾರ್ಯಕ್ರಮ
  • whatsapp icon

ರಾಯಚೂರು: ಸಾರ್ವಜನಿಕ ವಲಯಗಳನ್ನು ಖಾಸಗೀಕರಣಗೊಳಿಸಲಾಗುತ್ತಿದೆ. ಅಂಬಾನಿ, ಅದಾನಿಗಳಂಥ ಉದ್ಯಮಿಗಳು ಸಂಸತ್‍ ಅನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಮೂಲಕ ದೇಶವನ್ನೇ ತಮ್ಮ ಪಾರುಪತ್ಯದಲ್ಲಿಟ್ಟುಕೊಂಡಿದ್ದಾರೆ.ಶಾಂತರಸ ಅವರ ಪ್ರತಿರೋಧ ಮನೋಭಾವನೆಯನ್ನು ಜೀವನದಲ್ಲಿ ಅಳವಡಿಸಿಕೊಂಡು ಇಂಥ ಖಾಸಗೀಕರಣದ ವಿರುದ್ಧ ಹೋರಾಟ ನಡೆಸುವ ಅಗತ್ಯವಿದೆ ಎಂದು ಪ್ರಗತಿಪರ ಚಿಂತಕ ಸಿದ್ಧನಗೌಡ ಪಾಟೀಲ್ ಅವರು ಕರೆ ನೀಡಿದರು.

ನಗರದ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಸೋಮವಾರ ಶಾಂತರಸರ ಶತಮಾನೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಇಂದಿನ ಜಾಗತೀಕರಣದಿಂದ ನಾವು ಪ್ರಜೆಗಳಾಗಿ ಉಳಿದಿಲ್ಲ. ಗ್ರಾಹಕರಾಗಿದ್ದೇವೆ. ಕೊಳ್ಳುವ ಶಕ್ತಿ ಇದ್ದರೆ ಮಾತ್ರ ಪ್ರಜೆ, ಕೊಳ್ಳುವ ಶಕ್ತಿ ಇಲ್ಲದೇ ಇರದೇ ಇದ್ದರೆ ಪ್ರಜೆಗಳಲ್ಲ. ಅಂತಹ ಸ್ಥಿತಿಯಲ್ಲಿ ಜೀವನ ಸಾಗಸುತ್ತಿದ್ದೇವೆ. ಬಹಳಷ್ಟು ಅಭಿವೃದ್ಧಿ ಹೊಂದಿದೆ. ಆದರೆ ಅಭಿವೃದ್ಧಿಯಲ್ಲಿ ಮನುಷ್ಯ ಇಲ್ಲದಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ನಿಜಾಮರ ಆಳ್ವಿಕೆ ಸಂದರ್ಭದಲ್ಲಿ ದೌರ್ಜನ್ಯ, ದಬ್ಬಾಳಿಕೆ ಹೆಚ್ಚಾಗಿದ್ದವು. ಆ ಕಾಲಘÀಟ್ಟದಲ್ಲಿ ಶಾಂತರಸರು ಎರಡು ಕಥೆ ರಚಿಸಿದ್ದರು, ಆ ಕಥೆಗಳು ಓದಿದರೆ ನಿಜಾಮರ ಆಳ್ವಿಕೆಯ ಸಂದರ್ಭದಲ್ಲಿ ನಮ್ಮ ತಾತ ಮುತ್ತಾತ ಹೇಗಿದ್ದು ಎಂದು ತಿಳಿಯುತ್ತದೆ ಎಂದು ವಿವರಿಸದರು.

1947 ಸ್ವಾತಂತ್ರ್ಯ ದೊರಕಿತ್ತು, ಆದರೆ ಈ ನೆಲಕ್ಕೆ ಸ್ವಾತಂತ್ರ್ಯ ದೊರಕಿರಲಿಲ್ಲ. ಸ್ವಾತಂತ್ರ್ಯಕ್ಕಾಗಿ ಒಂದು ಕಾಯಬೇಕಾಗಿತು. ನಿಜಾಮರ ಆಳ್ವಿಕೆಗೆ ಕೈಯಲ್ಲಿ ಈ ಪ್ರದೇಶ ವಶದಲ್ಲಿತ್ತು, ನಿಜಾಮರ ದಾಳಿ, ದಬ್ಬಾಳಿಕೆ, ದೌರ್ಜನ್ಯಗಳ ಕಥೆಗಳಲ್ಲಿ ಅದ್ಭುತವಾಗಿ ಬರೆದಿದ್ದಾರೆ, ಇವತ್ತಿನ ಕಾಲಘಟ್ಟದಲ್ಲಿ ಶಾಂತರಸರ ಕಥೆಗಳನ್ನು ಪ್ರತಿಯೊಬ್ಬರು ಓದಬೇಕು ಎಂದು ಕರೆ ನೀಡದರು.

ನಿಜಾಮರ ಆಳ್ವಿಕೆಯಿಂದ ಬಿಡುಗಡೆಯಗಿದ್ದೇವೆ, ಆದರೆ ಸ್ವಾತಂತ್ರ್ಯ ಸಿಕ್ಕಿಲ್ಲ, ಎಂಬುದು ಮನಗಾಣಬೇಕು. ಸ್ವಾತಂತ್ರ್ಯ ಬಂದ ಮೇಲೆ ನಿಜಾಮರ ಗುಲಾಮಗಿರಿ ಮುಂದುವರೆದಿತ್ತು. ಬಹುತೇಕರು ಕಾಂಗ್ರೆಸ್ ನಾಯಕರಾಗಿದ್ದಾರೆ. ಅವರು ಇದೀಗ ಪುಡಾರಿಗಳಾಗಿ, ನಾಯಕರಾಗಿ, ನಮ್ಮನಾಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಅಂದು ಸ್ವಾತಂತ್ರ್ಯದ ಜೊತೆಗೆ ರಾಜಕೀಯದಲ್ಲಿ ಭ್ರಷ್ಟಾಚಾರವಿತ್ತು, ಇಂದು ಭ್ರಷ್ಟಾಚಾರವೇ ರಾಜಕೀಯವಾಗಿದೆ. ಈ ಸಂದರ್ಭದಲ್ಲಿ ಶಾಂತರಸರ ಹೋರಾಟ ನಮಗೆ ಅಗತ್ಯವಿದೆ. ನಗರ ವ್ಯಾಪಾರಿಕರಣ ಗ್ರಾಮಗಳಿಗೂ ವಿಸ್ತರಿಸಿದೆ. ವ್ಯಾಪಾರಿಕರಣವಾಗುತ್ತಿದೆ. ದೇಶದ ಪ್ರಜೆಗಳಾದ ನಾವುಗಳು ಶಾಂತರಸ ಮಾರ್ಗವನ್ನೇ ಅನುಸರಿಸಬೇಕಾಗಿದೆ ಎಂದು ತಿಳಿಸಿದರು.

ಆರ್.ಜಿ ಹಳ್ಳಿ ನಾಗರಾಜ ಅವರು, ಉಷಾ ಜ್ಯೋತಿಯವರ ಇರುವಿಕೆಯ ಹಾದಿಯಲ್ಲಿ ಗಜಲ್ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.

ಚಿಂತಕ ಡಾ.ಬಸವಪ್ರಭು ಪಾಟೀಲ್ ಬೆಟ್ಟದೂರು, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಭಗತರಾಜ ನಿಜಾಮಕಾರಿ, ರಾಮಣ್ಣ ಹವಳೆ, ಶಾಂತ ಕುಲಕರ್ಣಿ ಬಸವಪ್ರಭು ಸೇರಿದಂತೆ ಅನೇಕ ಸಾಹಿತಿಗಳು ಪ್ರಗತಿಪರ ಚಿಂತಕರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News