ಉದ್ಯಾನವನದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

Update: 2023-10-07 10:30 GMT

ಗಣಪತಿ ಡಣ್ಣೂರಕರ್ - ಮೃತ ವ್ಯಕ್ತಿ

ಕಲಬುರಗಿ: ನಗರದ ಶಹಬಾದ್ ಕ್ರಾಸ್ ಹತ್ತಿರದ ಸಾರ್ವಜನಿಕ ಉದ್ಯಾನವನದಲ್ಲಿ ನೇಣು ಬಿಗಿದ ಸ್ಥೀತಿಯಲ್ಲಿ ವ್ಯಕ್ತಿ ಓರ್ವನ ಮೃತದೇಹ ಪತ್ತೆಯಾಗಿರುವ ಘಟನೆ ಶನಿವಾರ ವರದಿಯಾಗಿದೆ.

ರಾಜಾಪುರ ಕಾಲೋನಿಯ ನಿವಾಸಿ ಗಣಪತಿ ಡಣ್ಣೂರಕರ್ (34) ಎಂಬಾತ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

ಶಹಬಾದ್ ಕ್ರಾಸ್ ಹತ್ತಿರ ಇರುವ ಪ್ರಶಾಂತ ನಗರದ ಗಾರ್ಡನ್ ಹತ್ತಿರ ಘಟನೆ ನಡೆದಿದ್ದು, ಕಲಬುರಗಿ ವಿಶ್ವ ವಿದ್ಯಾಲಯದ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಶವವನ್ನು ಕೆಳಗಿಳಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News