ನಾಳೆ ಸರಳ ಕಾರ್ಯಕ್ರಮ ಮೂಲಕ ಪದಗ್ರಹಣ; ಶುಕ್ರವಾರ ಕೇಂದ್ರ ವೀಕ್ಷಕರ ಆಗಮನ: ಬಿ.ವೈ.ವಿಜಯೇಂದ್ರ

Update: 2023-11-14 10:28 GMT

ಬೆಂಗಳೂರು, ನ.14: ಪದಗ್ರಹಣ ಸಮಾರಂಭಕ್ಕೆ ವಿಶೇಷ ಸಿದ್ಧತೆ ಮಾಡಿಲ್ಲ. ನಾಳೆ (ಬುಧವಾರ) ಪಕ್ಷದ ಕಚೇರಿಯಲ್ಲಿ ಸರಳ ಕಾರ್ಯಕ್ರಮದಲ್ಲಿ ಹಾಲಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಜವಾಬ್ದಾರಿ ಹಸ್ತಾಂತರ ಮಾಡಲಿದ್ದಾರೆ' ಎಂದು ನಿಯೋಜಿತ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆ ಜಿಲ್ಲೆಗಳಿಂದ ಕಾರ್ಯಕರ್ತರು ಬರಲಿದ್ದು, ಹಾಲಿ ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರು ನನಗೆ ಆಶೀರ್ವಾದ ಮಾಡಿ‌ ಜವಾಬ್ದಾರಿ ಹಸ್ತಾಂತರ ಮಾಡುತ್ತಾರೆ. ನಮ್ಮ ಎಲ್ಲ ಶಾಸಕರನ್ನು, ಮಾಜಿ ಶಾಸಕರನ್ನು, ಜಿಲ್ಲಾಧ್ಯಕ್ಷರನ್ನು ನಾಳೆಯ ಕಾರ್ಯಕ್ರಮಕ್ಕೆ ಬರಬೇಕೆಂದು ಮನವಿ ಮಾಡಿದ್ದೇನೆ ಎಂದರು.

ಇನ್ನೂ, 'ಶಾಸಕಾಂಗ ಪಕ್ಷದ ಸಭೆ ನ.17 ರಂದು (ಶುಕ್ರವಾರ) ನಿಗದಿಯಾಗಿದೆ. ಜೆ.ಪಿ.ನಡ್ಡಾ ಅವರಿಗೆ ಕರೆ ಮಾಡಿದ್ದೆ, ಅವರಿಂದ ಸಂದೇಶ ಬರಬೇಕಿದೆ. ಆದರೆ, ಕೇಂದ್ರದ ವೀಕ್ಷಕರು ನ. 16ರ ಸಂಜೆ ಬರುತ್ತಾರೆ ಅಥವಾ ಶುಕ್ರವಾರ ಬರುತ್ತಾರಾ ಎನ್ನೋದು ಗೊತ್ತಿಲ್ಲ. ಶುಕ್ರವಾರ ನಿಗದಿಯಾದ ಶಾಸಕಾಂಗ ಪಕ್ಷದ ಸಭೆಯನ್ನು ಮುಂದೂಡಿಕೆಯಂತಹ ಬೆಳವಣಿಗೆ ನಡೆದಿಲ್ಲ. ವೀಕ್ಷಕರು ಯಾರು ಬರುತ್ತಾರೆಂದು ಜೆ.ಪಿ‌. ನಡ್ಡಾ ಅವರು ತಿಳಿಸಲಿದ್ದಾರೆ' ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News