ರಸ್ತೆಬದಿ ಹೋಗುತ್ತಿದ್ದ ತಾಯಿ, ಮಗುವಿಗೆ ಢಿಕ್ಕಿ ಹೊಡೆದ ಕಾರು: ಮಗು ಮೃತ್ಯು

Update: 2023-09-13 18:55 GMT

ತೇಜಸ್‍ಗೌಡ -ಮೃತ ಮಗು

ಮಂಡ್ಯ, ಸೆ.13: ರಸ್ತೆಬದಿ ಹೋಗುತ್ತಿದ್ದ ತಾಯಿ ಮತ್ತು ಮಗುವಿಗೆ ಕಾರು ಢಿಕ್ಕಿಯಾಗಿ ಮಗ ಸಾವನ್ನಪ್ಪಿ, ತಾಯಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಮಳವಳ್ಳಿ ಪಟ್ಟಣದಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ಮಳವಳ್ಳಿ ಪಟ್ಟಣದ ಪೇಟೆಬೀದಿ ನಿವಾಸಿ ರಾಜು ಅವರ ಪುತ್ರ ತೇಜಸ್‍ಗೌಡ(8) ಸಾವನ್ನಪ್ಪಿದ್ದು, ಪತ್ನಿ ಉಷಾರಾಣಿ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಮನೆಪಾಠ ಮುಗಿಸಿಕೊಂಡು ಮಗುವನ್ನು ಮನೆಗೆ ಕರೆದುಕೊಂಡು ಹೋಗುತ್ತಿದ್ದಾಗ ಈ ದುರ್ಘಟನೆ ಸಂಭಿಸಿದ್ದು, ಕಾರು ಚಾಲಕ ಕಾರು ಸಮೇತ ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ.

ಮಳವಳ್ಳಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ತೆರಳುವ ಮಾರ್ಗಮಧ್ಯೆ ಮಗು ಸಾವನ್ನಪ್ಪಿದೆ.

ಮಳವಳ್ಳಿ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗೆ ಕ್ರಮವಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News