ಬಿಜೆಪಿಯಲ್ಲಿ ನೆಮ್ಮದಿಯಾಗಿ ಕೆಲಸ ಮಾಡಲು ಸಹಕರಿಸಿ: ಕ್ಷೇತ್ರದ ಮುಖಂಡರಿಗೆ ಶಾಸಕ ಸೋಮಶೇಖರ್ ಮನವಿ

Update: 2023-08-21 13:43 GMT

ಬೆಂಗಳೂರು, ಆ.21: ಯಾರನ್ನೊ ಪಕ್ಷದಿಂದ ಉಚ್ಛಾಟನೆ ಮಾಡಿ, ತೊಂದರೆ ನೀಡಬೇಕೆನ್ನುವುದು ನನ್ನ ಉದ್ದೇಶವಲ್ಲ.ಬದಲಾಗಿ, ನೆಮ್ಮದಿಯಾಗಿ ಕೆಲಸ ಮಾಡಲು ಅವಕಾಶ ನೀಡಿ ಎನ್ನುವುದು ನನ್ನ ಚಿಂತನೆ ಎಂದು ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಬ್ಬರು ಮುಖಂಡರನ್ನು ಉಚ್ಛಾಟನೆ ಮಾಡಿದ ಕ್ಷಣಕ್ಕೆ ಒಳ, ಹೊರಗೂ ಇರುವಂತಹದ್ದು ಬದಲಾಗಲ್ಲ. ಬಿಜೆಪಿ ಸೇರಿದ ನಾಯಕರನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುವುದು ನಿಲ್ಲಿಸಿ ಎಂದು ಹೇಳಿದ್ದೇನೆ ಎಂದರು.

ಚುನಾವಣೆಗೆ ಮೊದಲು ಸೋಮಶೇಖರ್ ಅವರು ಪಕ್ಷ ಬಿಟ್ಟು ಹೋಗುತ್ತಾರೆ ಎಂದು ಅಪಪ್ರಚಾರ ಮಾಡಿದರು. ಈಗಲೂ ಇದೇ ಹಾದಿಯಲ್ಲಿ ಕೆಲವರು ಮುಂದುವರೆದಿದ್ದಾರೆ. ಆದರೆ, ಒಳ್ಳೆಯ ವಾತಾವರಣ ಸೃಷ್ಟಿ ಮಾಡಬೇಕೆಂದು ಬಿಜೆಪಿ ನಾಯಕ ಸಿ.ಟಿ.ರವಿ ಅವರಿಗೆ ಹೇಳಿದ್ದೇನೆ. ಯಾರನ್ನೆ ಉಚ್ಛಾಟನೆ ಮಾಡಿದರೂ ಪರಿಹಾರ ಅಲ್ಲ ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News