ಹಾವೇರಿ: ಒಂದೇ ದಿನದಲ್ಲಿ ಇಬ್ಬರು ರೈತರು ಆತ್ಮಹತ್ಯೆ

Update: 2023-08-27 17:12 GMT

ಗಿರೀಶ ಮುರ್ಡಪ್ಪ , ನಾಗೇಶಪ್ಪ ಕೊಡಗದ್ದಿ 

ಹಾವೇರಿ: ಜಿಲ್ಲೆಯಲ್ಲಿ ಒಂದೇ ದಿನ ಇಬ್ಬರು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಸಾಲಬಾಧೆಯಿಂದ ಬ್ಯಾಡಗಿ ಮತ್ತು ರಾಣೇಬೆನ್ನೂರು ತಾಲೂಕಿನ ಇಬ್ಬರು ರೈತರು ಆತ್ಮಹತ್ಯೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ರಾಣೇಬೆನ್ನೂರು ತಾಲೂಕಿನ ತುಮ್ಮಿನಕಟ್ಟಿ ಗ್ರಾಮದ ರೈತ ಗಿರೀಶ ಮುರ್ಡಪ್ಪನವರ ಎಂಬವರು ಕೆವಿಜಿ ಬ್ಯಾಂಕ್ 4 ಲಕ್ಷ, ತುಮ್ಮಿನಕಟ್ಟಿ ಸೊಸೈಟಿಯಲ್ಲಿ 2 ಲಕ್ಷ ಮತ್ತು ಕೈಸಾಲವಾಗಿ ಒಂದುವರೆ ಲಕ್ಷ ಸಾಲ ಮಾಡಿದ್ದರು ಎನ್ನಲಾಗಿದೆ. ಸಾಲ ಮರುಪಾವತಿಸಲಾಗದೆ ಕಂಗಾಲಾಗಿದ್ದ ರೈತ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬ್ಯಾಡಗಿ ತಾಲೂಕಿನ ಶಿಡೇನೂರು ಗ್ರಾಮದ ರೈತ ನಾಗೇಶಪ್ಪ ಕೊಡಗದ್ದಿ ಅವರು, ಕೆನರಾ ಬ್ಯಾಂಕ್ ನಲ್ಲಿ 4 ಲಕ್ಷ, ಯೂನಿಯನ್ ಬ್ಯಾಂಕ್ ನಲ್ಲಿ 3.80 ಲಕ್ಷ ಸಾಲ ಮಾಡಿದ್ದರು ಎಂದು ವರದಿಯಾಗಿದೆ. ತನ್ನ ಮನೆಯ ದನದ ಕೊಟ್ಟಿಗೆಯಲ್ಲಿಯೇ ಅವರು ನೇಣಿಗೆ ಶರಣಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News