ಕೇವಲ ಸಚಿವರು ಮಾತ್ರವೇ ಸರ್ಕಾರವನ್ನ ಸಮರ್ಥಿಸಿಕೊಂಡರೆ ಸಾಲದು: ಶಾಸಕರಿಗೆ ಸಿಎಂ ಕಿವಿಮಾತು

Update: 2023-12-07 06:39 GMT

ಬೆಂಗಳೂರು: ಕಾಂಗ್ರೆಸ್‌ ವಿರುದ್ಧ ಬಿಜೆಪಿ, ಜೆಡಿಎಸ್ ಜಂಟಿಯಾಗಿ ದಾಳಿ ಮಾಡುತ್ತಿದ್ದು, ಕೇವಲ ಸಚಿವರು ಮಾತ್ರವೇ ಸರ್ಕಾರವನ್ನ ಸಮರ್ಥಿಸಿಕೊಂಡರೆ ಸಾಲದು.ಶಾಸಕರೂ ಕೂಡ ಸಚಿವರಿಗೆ ಸಾಥ್ ನೀಡಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರು ತಮ್ಮ ಪಕ್ಷದ ಶಾಸಕರು, ಸಚಿವರಿಗೆ ಕಿವಿಮಾತು ಹೇಳಿದ್ದಾರೆ.

ಶಾಸಕರೂ ಕೂಡ ಗಟ್ಟಿಯಾಗಿ ವಿಪಕ್ಷಗಳ ವಿರುದ್ಧ ದನಿ ಎತ್ತಬೇಕು.ಕೆಲವೊಮ್ಮೆ ಪ್ರವೋಕ್ ಮಾಡಿದರೂ ಮಾಡಬಹುದು. ಯಾವುದೇ ಕಾರಣಕ್ಕೂ ಏನೋ ಮಾತನಾಡಲು ಹೋಗಿ ಇನ್ನೇನೋ ಗೊಂದಲ ಆಗುವಂತೆ ಮಾಡಬೇಡಿ. ಎಲ್ಲರೂ ಒಟ್ಟಾಗಿ ಹೋರಾಟ ಮಾಡಬೇಕು ಎಂದು ಹೇಳಿದರು.

ಸದನದಲ್ಲಿ ಹಾಜರಿದ್ದು ಬರ, ಉತ್ತರ ಕರ್ನಾಟಕ ಭಾಗದ ಸಮಸ್ಯೆ ಕುರಿತ ಚರ್ಚೆಯಲ್ಲಿ ಮಾತನಾಡಿ. ಗ್ಯಾರಂಟಿ ಯೋಜನೆಗಳು ಪರಿಣಾಮಕಾರಿಯಾಗಿ ತಲುಪುತ್ತಿಲ್ಲವೆಂದು ಅಪಪ್ರಚಾರ ನಡೆಯುತ್ತಿದ್ದು, ಅದನ್ನು ಸರಿಯಾಗಿ ಕ್ಷೇತ್ರದಲ್ಲಿ ನಿಭಾಯಿಸಿ ಎಂದು ತಿಳಿಸಿದರು.

ಸಚಿವ ಜಮೀರ್ ಅಹಮದ್ ಖಾನ್ ವಿಚಾರವನ್ನು ಮುಂದಿಟ್ಟುಕೊಂಡು ಹೋರಾಡಲು ಬಿಜೆಪಿ, ಜೆಡಿಎಸ್ ಮುಂದಾಗಿವೆ. ಮುಂದಿನ ವಾರ ದೊಡ್ಡ ಮಟ್ಟಕ್ಕೆ ಕೊಂಡೊಯ್ಯಲು ಬಿಜೆಪಿ - ಜೆಡಿಎಸ್ ಜಂಟಿಯಾಗಿ ತಯಾರಿ ನಡೆಸಿವೆ. ಆದ್ದರಿಂದಬ ಪಕ್ಷದ ಶಾಸಕರು ಜಮೀರ್ ಬೆಂಬಲಕ್ಕೆ ನಿಲ್ಲಬೇಕು ಎಂದು ಸೂಚಿಸಿದರು.

ಪ್ರತಿಪಕ್ಷಗಳು ಕೆರಳಿಸಲಿವೆ. ಅವರ ಬಲೆಗೆ ಬೀಳಬೇಡಿ. ಇದಕ್ಕೆ ಸ್ಪಷ್ಟ ತಿರುಗೇಟು ನೀಡಬೇಕು. ಸಚಿವರು ಮತ್ತು ಶಾಸಕರ ನಡುವೆ ವೈಯಕ್ತಕವಾಗಿ ಏನೇ ಅಸಮಾಧಾನ ಇರಬಹುದು ಆದರೂ ಈ ಸಂದರ್ಭದಲ್ಲಿ ಒಗ್ಗಟ್ಟು ಕಾಯ್ದುಕೊಳ್ಳಿ ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News