ಲಿಂಗಾಯತ ಅಧಿಕಾರಿಗಳನ್ನು ಸರಕಾರ ಮೂಲೆಗುಂಪು ಮಾಡುತ್ತಿರುವುದು ನಿಜ: ಕಾಂಗ್ರೆಸ್‌ ಹಿರಿಯ ಶಾಮನೂರು ಶಿವಶಂಕರಪ್ಪ

Update: 2023-09-30 15:14 GMT

ದಾವಣಗೆರೆ, ಸೆ. 30: ವೀರಶೈವ ಲಿಂಗಾಯತ ಅಧಿಕಾರಿಗಳನ್ನು ಸರಕಾರವು ಮೂಲೆಗುಂಪು ಮಾಡುತ್ತಿರುವುದು ನಿಜ ಎಂದು ಮಾಜಿ ಸಚಿವ ಹಾಗೂ ಅಖಿತ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.

ಶನಿವಾರ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼನಮ್ಮ ಸಮಾಜದ ಅಧಿಕಾರಿಗಳಿಗೆ ತೊಂದರೆಯಾಗಿದೆ ಎಂದು ಹೇಳಿಕೆ ನೀಡಿದ್ದು ನಿಜ. ಇರುವ ಸತ್ಯ ಹೇಳಿದ್ದು, ಕೆಲ ಅಧಿಕಾರಿಗಳಿಗೆ ಮುಖ್ಯವಾದ ಹುದ್ದೆಗಳು ಕೊಟ್ಟಿಲ್ಲ. ಅವರು ಬೆಂಗಳೂರಲ್ಲಿ ತಿರುಗಾಡುತ್ತಿದ್ದಾರೆ. ಒಟ್ಟು ಸಮಾಜಕ್ಕೆ ತೊಂದರೆಯಾಗಿದೆʼ ಎಂದರು.

ʼʼಒಂದೊಂದು ಸರಕಾರ ಬಂದಾಗ ಒಂದೊಂದು‌ ರೀತಿ ಇರುತ್ತದೆ. ಈ ಸರಕಾರದಲ್ಲಿ ಲಿಂಗಾಯತ ಅಧಿಕಾರಿಗಳು ಅನ್ಯಾಯ ಆಗುತ್ತಿರುವುದು ನಿಜ. ಅದೇ ಕಾರಣಕ್ಕೆ ಈ ವಿಚಾರ ಹೊರಗೆ ಬಂದಿದೆʼʼ ಎಂದರು. 

ಸರಕಾರದ ಜೊತೆ ಎಲ್ಲ ಸಮಾಜದವರೂ ಇದ್ದಾರೆ: ಲಕ್ಷ್ಮಿ ಹೆಬ್ಬಾಳ್ಕರ್

ʼʼಹಿಂದೆಲ್ಲ ಲಿಂಗಾಯತ ಸಮಾಜ ಕಾಂಗ್ರೆಸ್ ಜೊತೆಗೆ ಇಲ್ಲ ಎಂಬ ಕೊರಗಿತ್ತು. ಆ ಕೊರಗು ಈಗ ಇಲ್ಲ. ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಹಿರಿಯರಾದ ಶಾಮನೂರು ಶಿವಶಂಕರಪ್ಪ ಅವರ ಜೊತೆ ಚರ್ಚೆ ಮಾಡುತ್ತೇನೆʼʼ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪ್ರತಿಕ್ರಿಯಿಸಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News