ಬೇಕಾದರೆ ಮುನಿಯಪ್ಪ ಮಂತ್ರಿಸ್ಥಾನ ಬಿಟ್ಟುಕೊಡ್ಲಿ, ನಾನು ಬಿಡಲ್ಲ: ಗೃಹ ಸಚಿವ ಪರಮೇಶ್ವರ್‌

Update: 2023-08-17 07:45 GMT

ಬೆಂಗಳೂರು: ʼʼಎರಡೂವರೆ ವರ್ಷ ಆದ ಮೇಲೆ ಹಿರಿಯರು ಮಂತ್ರಿ ಸ್ಥಾನ ಬಿಡಬೇಕುʼʼ ಎಂಬ ಆಹಾರ ಮತ್ತು ನಾಗರಿಕರ ಪೂರೈಕೆ ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ ಅವರ ಹೇಳಿಗೆ ನನ್ನ ಸಹ ಮತ ಇಲ್ಲ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಹೇಳಿದ್ದಾರೆ.

ಗುರುವಾರ ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ʼʼನಾನೇಕೆ ಸಚಿವಸ್ಥಾನ ಬಿಟ್ಟು ಕೊಡಬೇಕು, ಅದು ನನಗೆ ಅನ್ವಯಿಸಲ್ಲ, ಅವರ ಹೇಳಿಕೆಗೆ ನನ್ನ ಸಹಮತ ಇಲ್ಲ. ಅವರು ಹೇಳಿರೋದು ತಪ್ಪೇನಿಲ್ಲ, ಅದು ಅವರ ವೈಯಕ್ತಿಕʼʼ ಎಂದು ಸ್ಪಷ್ಟಪಡಿಸಿದ್ದಾರೆ. 

ಕೆ.ಎಚ್.‌ ಮುನಿಯಪ್ಪ ಹೇಳಿದ್ದೇನು? 

ʼʼಇದು ನನ್ನ ವೈಯಕ್ತಿಕ ವಿಚಾರ. ರಾಜಕೀಯವಾಗಿ ಪಕ್ಷ ಬಲಪಡಿಸಬೇಕಾದರೆ ಎಲ್ಲರಿಗೂ ಅವಕಾಶ ಕೊಡಬೇಕು. ನಾನು ಬೇಕಾದರೆ ಸಚಿವ ಸ್ಥಾನ ಬಿಟ್ಟುಕೊಡುತ್ತೇನೆ ನನಗೇನು ಅಭ್ಯಂತರ ಇಲ್ಲʼʼ ಎಂದು ಹೇಳಿದ್ದರು. 

ಮುನಿಯಪ್ಪ ಅವರ ಈ ಹೇಳಿಕೆ ಇದೀಗ ಕಾಂಗ್ರೆಸ್‌ ನಲ್ಲಿ ಸಂಚಲನ ಸೃಷ್ಟಿಸಿದೆ.  

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News