ಬಾಡೂಟಕ್ಕೆ ಹೋದ ಎಚ್‍ಡಿಕೆ ‘ಕಾವೇರಿ ನೀರು ಕುರಿತ ಸರ್ವಪಕ್ಷ ಸಭೆಗೆ ಬಂದಿಲ್ಲ’ : ಸಚಿವ ಚಲುವರಾಯಸ್ವಾಮಿ

Update: 2024-07-15 15:06 GMT

ಬೆಂಗಳೂರು : ಬಾಡೂಟಕ್ಕೆ ಹಾಜರಾಗಿ, ಸರ್ವಪಕ್ಷ ಸಭೆಗೆ ಗೈರಾಗುವ ಮೂಲಕ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮಂಡ್ಯದ ಜನರಿಗೆ ಅಗೌರವ ಮಾಡಿದ್ದಾರೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಟೀಕಿಸಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಮಾತನಾಡಿದ ಅವರು, ‘ಕಾವೇರಿ ನದಿ ನೀರು ಕುರಿತ ಸರ್ವಪಕ್ಷ ಸಭೆಗೆ ನಿನ್ನೆ ಕೇಂದ್ರದ ಸಚಿವರು ಯಾರೂ ಬಂದಿಲ್ಲ. ಅದರಲ್ಲೂ ಕೇಂದ್ರ ಸಚಿವ, ನಮ್ಮ ಮಂಡ್ಯದ ಸಂಸದ ಕುಮಾರಸ್ವಾಮಿ ಅವರು ಸಭೆಗೆ ಬಂದಿಲ್ಲ. ಅವರು ಬಾಡೂಟಕ್ಕೆ ಹೋಗಿದ್ದರು. ಇದು ದುರಂತ ಅಲ್ಲವೇ ಎಂದು ಪ್ರಶ್ನಿಸಿದರು.

ತಮಿಳುನಾಡು ರಾಜಕೀಯ ಮಾಡಬಾರದು: ಕಾವೇರಿ ವಿಚಾರವಾಗಿ ನಮ್ಮ ಸರಕಾರ ರಾಜ್ಯದ ರೈತರ ಹಿತಾಸಕ್ತಿ ಕಾಪಾಡುವ ಕೆಲಸ ಮಾಡುತ್ತೆ. ನಾವು ಸರ್ವಪಕ್ಷ ಸಭೆಯಲ್ಲಿ ನಿರ್ಣಯ ಕೈಗೊಳ್ಳಬಾರದು ಎಂದು ಹೇಳಲು ತಮಿಳುನಾಡಿಗೂ ಅಧಿಕಾರ ಇಲ್ಲ. ಅವರು ಬೇಕಾದರೆ ಸರ್ವಪಕ್ಷ ಸಭೆ ಮಾಡಲಿ ಎಂದರು.

ಇದೇ ವಿಚಾರವಾಗಿ ಶಾಸಕ ಬಾಲಕೃಷ್ಣ ಮಾತನಾಡಿ, ‘ಕುಮಾರಸ್ವಾಮಿ ಸಭೆಗೆ ಹಾಜರಾಗಿಲ್ಲ. ಇದರಿಂದ ನಮಗೂ ಕೂಡ ಭ್ರಮನಿರಸನವಾಗಿದೆ. ಇವತ್ತು ಅವರು ಮಾತಿಗೂ ಕೂಡ ತಪ್ಪಿದ್ದಾರೆ. ಆದ್ದರಿಂದ ಮಂಡ್ಯದ ಜನರಿಗೆ ಎಚ್‍ಡಿಕೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News