ಮೈಸೂರು: ಕಾಲುವೆಗೆ ಬಿದ್ದು ಒಂದೇ ಕುಟುಂಬದ ಮೂವರು ಮೃತ್ಯು

Update: 2023-10-01 08:51 GMT

ಸಾಂದರ್ಭಿಕ ಚಿತ್ರ

ಮೈಸೂರು,ಅ.1: ಆಕಸ್ಮಿಕವಾಗಿ ಕಾಲು ಜಾರಿ ಕಾಲುವೆಗೆ ಬಿದ್ದ ಪುತ್ರಿಯನ್ನು ರಕ್ಷಣೆ ಮಾಡಲು ಹೋದ ಅಪ್ಪ-ಅಮ್ಮನೂ ಸಹ ಸಾವನ್ನಪ್ಪಿದ  ಘಟನೆ ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲ್ಲೂಕಿನ ಚಂಗೌಡನಹಳ್ಳಿ ಬಳಿ ಜರುಗಿದೆ.

ಮೃತಪಟ್ಟವರನ್ನು ಬೆಂಗಳೂರಿನ‌ ಜಯನಗರದ ನಿವಾಸಿಗಳಾದ ಶಾಹಿರ ಬಾನು (20) ತಂದೆ ಮುಹಮ್ಮದ್ ಕಫೀಲ್ (42) ತಾಯಿ ಶಾವರ ಬಾನು (35) ಎಂದು ಗುರುತಿಸಲಾಗಿದೆ.

ಕೈ-ಕಾಲು ತೊಳೆದುಕೊಂಡು ಬರಲು ನುಗು ಜಲಾಶಯದ ಬಲದಂಡೆ ಕಾಲುವೆಗೆ ಹೋದ ಮಗಳು ಕಾಲು ಜಾರಿ ಬಿದ್ದಿದ್ದಾಳೆ. ಅವಳನ್ನು ರಕ್ಷಣೆ ಮಾಡಲು ಹೋದ ಅಪ್ಪ-ಅಮ್ಮ ಕೂಡ ನೀರಿನಲ್ಲಿ ಮುಳುಗಿದ್ದಾರೆಎಂದು ತಿಳಿದು ಬಂದಿದೆ.

ಈ ಸಂಬಂಧ ಸರಗೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News