ವಿಜ್ಞಾನಿಗಳಿಗೆ ಪ್ರೋತ್ಸಾಹ ನೀಡದ ಪ್ರಧಾನಿ ಮೋದಿಗೆ ಚಂದ್ರಯಾನ-3 ಯಶಸ್ಸಿನ ಕ್ರೆಡಿಟ್ ಪಡೆಯಲು ನೈತಿಕತೆಯಿಲ್ಲ: ಕಾಂಗ್ರೆಸ್ ವಾಗ್ದಾಳಿ

Update: 2023-08-25 17:52 GMT

ಫೈಲ್‌ ಚಿತ್ರ

ಬೆಂಗಳೂರು, ಆ. 25: ‘ಸಂಶೋಧನೆಗಳಿಗೆ, ವಿಜ್ಞಾನಿಗಳಿಗೆ ಪ್ರೋತ್ಸಾಹ ನೀಡದ ಪ್ರಧಾನಿ ನರೇಂದ್ರ ಮೋದಿಯವರಿಗೆ ಚಂದ್ರಯಾನ-3 ಯಶಸ್ಸಿನ ಕ್ರೆಡಿಟ್ ಪಡೆಯಲು ನೈತಿಕತೆಯಿಲ್ಲ’ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

ಶುಕ್ರವಾರ ಟ್ವೀಟ್(ಎಕ್ಸೋ) ಮಾಡಿರುವ ಕಾಂಗ್ರೆಸ್, ‘ವಿಜ್ಞಾನಿಗಳ ಪರಿಶ್ರಮದ ಫಲವಾಗಿರುವ ಚಂದ್ರಯಾನದ ಯಶಸ್ಸಿನ ಕ್ರೆಡಿಟ್ ತೆಗೆದುಕೊಳ್ಳಲು ಮುಂದಾಗುವ ಕೇಂದ್ರ ಸರಕಾರ ಬಾಹ್ಯಾಕಾಶ ಸಂಶೋಧನೆಗೆ ಬಜೆಟ್‍ನಲ್ಲಿ ಶೇ.8ರಷ್ಟು ಅನುದಾನವನ್ನು ಕಡಿತಗೊಳಿಸಿದೆ. ಅಲ್ಲದೆ ಚಂದ್ರಯಾನ-3 ಯೋಜನೆಯ ಅನುದಾನದಲ್ಲಿ ಶೇ.38ರಷ್ಟು ಕಡಿತಗೊಳಿಸಿದ್ದಾರೆ’ ಎಂದು ದೂರಿದೆ.

‘ವೈಜ್ಞಾನಿಕ ಮನೋಭಾವದ ಬಗ್ಗೆ ನಂಬಿಕೆ ಇಲ್ಲದ ಬಿಜೆಪಿಗೆ ಸಂಶೋಧನೆ, ವಿಜ್ಞಾನ ಕ್ಷೇತ್ರಗಳ ಬಗ್ಗೆ ನಿರಾಸಕ್ತಿ ಎಂಬುದಕ್ಕೆ ಇದು ಉದಾಹರಣೆ’ ಎಂದು ಕಾಂಗ್ರೆಸ್ ಇದೇ ಸಂದರ್ಭದಲ್ಲಿ ಲೇವಡಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News